ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವು ನ.30ರಂದು ಸಂಘದ ಆವರಣದಲ್ಲಿ ಜರುಗಿತು.
ಸಂಘದ ಹಿರಿಯ ಸದಸ್ಯರಾದ ಕೃಷ್ಣಾನಂದ ರಾವ್, ದಿನೇಶ್ ಆಚಾರ್ಯ, ಶ್ರೀಮತಿ ರಂಜಿನಿ ಹಾಗೂ ಲಕ್ಷ್ಮಣ್ ನಾಯಕ್ ಇವರಿಗೆ ಇವರ ವೈಯುಕ್ತಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಧರ ಜಿ ಭಿಡೆ ಹಾಗೂ ಊರಿನ ಹಿರಿಯರಾದ ಬಾಬು ಪೂಜಾರಿ ಮತ್ತು ನಾರಾಯಣ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕರಾದ ನಾಮದೇವರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಶಿಧರ ತೋಸರ್ ಸ್ವಾಗತಿಸಿದರು.











