ಬೆಳ್ತಂಗಡಿ: ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ತೆಕ್ಕಾರು ಗ್ರಾಮದ ಬಾಜಾರು ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಇಂದು ಸಂಜೆ ನಡೆದಿರುತ್ತದೆ.
ತೆಕ್ಕಾರು ಗ್ರಾಮದ ಬಾಜಾರು ಕಕ್ಕಿಜಮ್ಮ, ಇಸುಬು ರವರ ಮನೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ, ಬಾಗಿಲು, ಟೈಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಮನೆಯೊಳಗೆ ಇದ್ದ ವಸ್ತುಗಳಿಗೆಸಂಪೂರ್ಣ ಹಾನಿಯಾಗಿದ್ದು ಸುಮಾರು ರೂ.2 ಲಕ್ಷ ನಷ್ಟ ಆಗಿರುತ್ತದೆ ಎಂದು ಮನೆಯವರು ತಿಳಿಸಿರುತ್ತಾರೆ.











