March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಿ| ಪದ್ಮನಾಭ ಆಚಾರ್ಯರ ಕುಟುಂಬಕ್ಕೆ ಸ್ನೇಹಿತರ ನೆರವು: ಶ್ರಮದಾನದ ಮೂಲಕ ಮನೆ ದುರಸ್ತಿ

ಕೊಕ್ಕಡ: ಕೆಲವು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದ ಕೊಕ್ಕಡ ಗ್ರಾಮದ ಪದ್ಮನಾಭ ಆಚಾರ್ಯ ಅವರ ಮನೆಯು ವಾಸಿಸಲು ಯೋಗ್ಯವಾಗದ ಮಟ್ಟಿಗೆ ಹಾಳಾಗಿದ್ದು ಮೃತರ ಆಪ್ತ ಸ್ನೇಹಿತರು ಹಾಗೂ ದಾನಿಗಳು ಶ್ರಮದಾನದ ಮೂಲಕ ಆಚಾರ್ಯರ ಮನೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡರು.

ಮನೆಗೆ ಹೊಸ ರೂಪ ನೀಡುವ ಉದ್ದೇಶದಿಂದ ಶ್ರಮದಾನ ಕಾರ್ಯ ತೀವ್ರಗತಿಯಲ್ಲಿ ನಡೆಯಿತು. ಕುಟುಂಬದ ಸಂಕಷ್ಟದ ವೇಳೆಯಲ್ಲಿ ನಾವು ಇದ್ದೇವೆ ಎಂಬ ಭರವಸೆಯನ್ನು ನೀಡಿ, ಮೃತರ ಸ್ನೇಹಿತರ ಬಳಗವೇ ಸಂಪೂರ್ಣ ಕಾರ್ಯವನ್ನು ಮುನ್ನಡೆಸಿದೆ.

ಈ ಕಾರ್ಯಕ್ಕೆ ಮೃತರ ಆಪ್ತ ಸ್ನೇಹಿತ, ಸಮಾಜಸೇವಕ ತುಕ್ರಪ್ಪ ಶೆಟ್ಟಿ ನೂಜೆ, ಉದ್ಯಮಿ ನಾರಾಯಣಗೌಡ, ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಶಾಂತಪ್ಪ ಮಡಿವಾಳ, ರಜಾಕ್ ಕೊಕ್ಕಡ, ಜಾರ್ಜ್, ತಾಲೂಕು ಪಂಚಾಯತಿ ಮಾಜಿ ಸದಸ್ಯಲಕ್ಷ್ಮೀನಾರಾಯಣ ಇವರ ನೇತೃತ್ವದಲ್ಲಿ ಅವರೊಂದಿಗೆ ಶ್ಯಾಮರಾಜ್ ಪಟ್ರಮೆ, ಕಾಂಟ್ರಾಕ್ಟರ್ ಫಾರೂಕ್ ಮಡೆಂಜೋಡಿ, ಬಾಲಕೃಷ್ಣ ಗೌಡ ಬಳಕ್ಕ, ಧನಂಜಯ ಪಟ್ರಮೆ, ಜನಾರ್ಧನ, ಲಾರೆನ್ಸ್ ಪಾಯಿಸ್, ಶ್ರೀಧರ ಗೌಡ ಹಾಗೂ ಮೃತರ ಪತ್ನಿ, ಮಕ್ಕಳು, ಸಹೋದರ ಸೇರಿದಂತೆ ಸೇರಿ ಸುಮಾರು 70 ಮಂದಿ ಸ್ನೇಹಿತರ ತಂಡ ಶ್ರಮದಾನದಲ್ಲಿ ಪಾಲ್ಗೊಂಡು ಮನೆ ದುರಸ್ತಿಗೆ ಕೈ ಜೋಡಿಸಿದರು.

Related posts

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ:ಪತ್ರಕರ್ತರ ಸಂಘದ ನೂತನ ಕಟ್ಟಡ ಹಾಗೂ ನಿವೇಶನಕ್ಕೆ ರೂ.20 ಲಕ್ಷ ಅನುದಾನ: ಹರೀಶ್ ಪೂಂಜ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಆಚರಣೆ

Suddi Udaya

ಸಿಎ ಪರೀಕ್ಷೆಯಲ್ಲಿ ಉಜಿರೆಯ ವಫಾ ಉತ್ತೀರ್ಣ

Suddi Udaya

ಇಂದಬೆಟ್ಟು ನವ ವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

Suddi Udaya

ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya
error: Content is protected !!