ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವ ಜಯಂತ್ ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಡಿ.12 ರಂದು ಆಗಮಿಸಿದ್ದಾರೆ.

ಬೆಳ್ತಂಗಡಿ ನ್ಯಾಯಾಲಯದಿಂದ 22-12-1986 ರಂದು ಪದ್ಮಲತಾ ಕೊಲೆ ಪ್ರಕರಣದ ಬಗ್ಗೆ ಎಸ್ಐಟಿಗೆ ದೂರು ನೀಡಲಾಗಿದ್ದು. ಅದರ ದಾಖಲೆಗಳನ್ನು ತೆಗೆಯಲು ಪದ್ಮಲತಾ ಸಹೋದರಿ ಜೊತೆ ಆಗಮಿಸಿದ್ದು.ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿ ತನಿಖೆ ಮಾಡಲು ಅನುಕೂಲವಾಗಲಿದೆ ಎಂದು ನ್ಯಾಯಾಲಯಕ್ಕೆ ಆಗಮಿಸಿರುವುದಾಗಿ ಜಯಂತ್ಟಿ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದ ಬಗ್ಗೆ ವರದಿಯ ಪ್ರತಿ ನನಗೆ ಇನ್ನೂ ಲಭಿಸಿಲ್ಲ. ವರದಿ ಬಂದ ಬಳಿಕ ಏನೂ ಇದೆ ಎಂದು ಗೊತ್ತಾಗಲಿದೆ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬಗ್ಗೆ ನಂಬಿಕೆ ಇದೆ ಎಂದರು.













