ಬಂದಾರು: ಇಲ್ಲಿನ ಒಟೆಚ್ಚಾರ್ ಉಮರಬ್ಬ ಇವರ ತೋಟಕ್ಕೆ ಡಿ.22 ರಂದು ರಾತ್ರಿ ಆನೆಯ ಹಿಂಡು ಲಗ್ಗೆ ಇಟ್ಟಿದ್ದು ಪೈಪು ಬಾಳೆಗಿಡ ನಾಶ ಪಡಿಸಿದ ಘಟನೆ ನಡೆದಿದೆ.
ಕಳೆದ ಎರಡು ದಿನಗಳಿಂದ ಬಟ್ಲಡ್ಕ ಮಸೀದಿಯ ನದಿ ತೀರದಲ್ಲಿ ಕಾಡಾನೆಗಳು ಓಡಾಟ ನಡೆಸಿದ್ದು ಕಾಡಾನೆಯ ಉಪಟಳದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಗ್ರಾಮಸ್ಥರಿಂದ ಒತ್ತಾಯಿಸಲಾಗಿದೆ.
✍️ ಮುಹಮ್ಮದ್ ಬಂದಾರು











