ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚಿನಲ್ಲಿ ಕ್ರಿಸ್ಮಸ್ ಮಹೋತ್ಸವದ ಪವಿತ್ರ ಬಲಿಪೂಜೆ ಭಕ್ತಿಭಾವದಿಂದ ನಡೆಯಿತು.

ಈ ಪವಿತ್ರ ಬಲಿಪೂಜೆಯ ಮುಖ್ಯ ಅರ್ಪಣಾಧಿಕಾರಿಯಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ಭಾಗವಹಿಸಿದರು. ಚಾನ್ಸೆಲರ್ ಫಾ. ಲಾರೆನ್ಸ್ ಪೂಣೋಲಿಲ್, ಫಾ. ಅಬ್ರಹಾಂ ಪಾಟರಿಲ್, ಫಾ. ಥಾಮಸ್ ಕಣ್ಣಂಕಲ್, ಗೌರವಾನ್ವಿತ ಧಾರ್ಮಿಕ ಸಹೋದರಿಯರು ಹಾಗೂ ಅಪಾರ ಸಂಖ್ಯೆಯ ವಿಶ್ವಾಸಿಗಳು ಈ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಭು ಯೇಸು ಕ್ರಿಸ್ತನ ಜನನೋತ್ಸವವನ್ನು ಸಂಭ್ರಮ, ಪ್ರಾರ್ಥನೆ ಮತ್ತು ಸಹೋದರತ್ವದ ಮನೋಭಾವದಲ್ಲಿ ಎಲ್ಲರೂ ಒಟ್ಟಾಗಿ ಆಚರಿಸಿದರು.











