ಬೆಳ್ತಂಗಡಿ :ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ 2025-26ನೇ ಸಾಲಿಗೆ ಮಂಗಳೂರು ವಲಯದ 14 ವರ್ಷದೊಳಗಿನ ಪುರುಷರ ತಂಡವನ್ನು ಆಯ್ಕೆ ಮಾಡಲು ಕೆಎಸ್ಸಿಎ ಮಂಗಳೂರು ವಲಯವು ಅಂಡರ್14 ವರ್ಷದೊಳಗಿನ ಪುರುಷರ ಆಯ್ಕೆ ಟ್ರಯಲ್ಸ್ ನ್ನು ಡಿ. 27ರಂದು ಮಂಗಳೂರು ನಂತೂರಿನ ಪದುವಾ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕಿನಿಂದ ಉಜಿರೆ ಎಸ್ ಡಿ ಎಂ KSCB ತೀರ್ಪುಗಾರರಾದ ಪವಿತ್ರ ಕುಮಾರ್ ಹಾಗೂ ಪುನೀತ್ ಕುಮಾರ್ ಇವರಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಧನುಷ್ ಆಚಾರ್ಯ ಕನ್ಯಾಡಿ ಎಡಗೈ ಬ್ಯಾಟ್ಸ್ ಮ್ಯಾನ್, ಹ್ಯಾನ್ಸನ್ ಉಜಿರೆ ವೇಗದ ಬೌಲರ್, ಸಮ್ಯಕ್ ಆಚಾರ್ಯ ನೇತ್ರಾನಗರ ವೇಗದ ಬೌಲರ್ , ಆರ್ಯನ್ ಬ್ಯಾಟ್ಸ್ ಮ್ಯಾನ್& ಆಲ್ ರೌಂಡರ್ , ತೀರ್ಥ ಪ್ರಸಾದ್ ಬೊಲ್ಮ ಆಫ್ ಸ್ಪಿನ್ನರ್ ಆಲ್-ರೌಂಡರ್, ಭೂಷಣ್ ಉಜಿರೆ ಬ್ಯಾಟ್ಸ್ ಮ್ಯಾನ್ & ಆಲ್ ರೌಂಡರ್ ರವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾರೆ.











