September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಲವಂತಿಗೆ -ಮಿತ್ತಬಾಗಿಲು ನಲ್ಲಿ “ಸ್ವ ಸಹಾಯ ಸಂಘಗಳ” ಉದ್ಘಾಟನೆ

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಹಳೇಕೋಟೆ ಇದರ ವತಿಯಿಂದ ವಾಣಿ “ಸ್ವ ಸಹಾಯ ಸಂಘಗಳ” ಉದ್ಘಾಟನೆಯನ್ನು ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಯ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಮಲವಂತಿಗೆ ಮತ್ತು ಮಿತ್ತಬಾಗಿಲು ಗ್ರಾಮದಲ್ಲಿ ದೀಪ ಪ್ರಜ್ವಲನ ಮೂಲಕ ಸಂಘ ದ ಪುಸ್ತಕ ಬಿಡುಗಡೆ ಮೂಲಕ ಸ್ವ-ಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು.

ಗುಂಡೀರು ರವಿಚಂದ್ರ ಗೌಡ ಮತ್ತು ಆನಂದ ಗೌಡ ಮೈರ್ನೋಡಿ ಮನೆಯಲ್ಲಿ ನಡೆದ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಮಾಧವ ಗೌಡ ಬೆಳ್ತಂಗಡಿ ಭಾಗವಹಿಸಿ ಸಂಘದ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಲವಂತಿಗೆ-ಮಿತ್ತಬಾಗಿಲು ಗ್ರಾಮದ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷರು ಹಾಗೂ ಸೋಮಂತ್ತಡ್ಕ ಶಾಖೆ ಯ ಸಲಹಾ ಸಮಿತಿಯ ನಿರ್ದೇಶಕರಾದ ಆನಂದ ಗೌಡ ಮೈರ್ನೋಡಿ, ಸಲಹಾ ಸಮಿತಿಯ ನಿರ್ದೇಶಕರಾದ ಜಯವರ್ಮ ಗೌಡ ಕಳ್ಬೇಟ್ಟು, ಬಂಗಾಡಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶೀನಪ್ಪ ಗೌಡ ನೇತ್ರಕೊಡಂಗೆ, ರವಿಚಂದ್ರ ಗೌಡ ಗುಂಡೀರು ಹಾಗೂ ಸ್ವ- ಸಹಾಯ ಸಂಘದ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.

ಈಗಾಗಲೇ ರಚನೆಯಾದ 6 ಸಂಘಗಳ ಸದಸ್ಯರುಗಳಿಗೆ ಸ್ವ ಸಹಾಯ ಸಂಘದ ನಿಯಮಾವಳಿ ಮತ್ತು ನಿಬಂಧನೆಗಳ ಬಗ್ಗೆ ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ವಿವರಿಸಿ ಮಾಹಿತಿ ನೀಡಿದರು. ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಾಖಾಪ್ರಬಂಧಕರಾದ ಉಮೇಶ್. ಎಂ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯಿಂದ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ರವರ ಭೇಟಿ : ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಪುದುವೆಟ್ಟು: ಶ್ರೀಮತಿ ಯಶೋದಾ ನಿಧನ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಇತ್ತೀಚೆಗೆ ನಿಧನರಾದ ಗಣೇಶ್ ಕಾಯರ್ತಡ್ಕ ರವರಿಗೆ ನುಡಿನಮನ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯ ಬದಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಯುವಕರ ತಂಡ

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya
error: Content is protected !!