ಮುಂಡಾಜೆ: ಭಾಸ್ಕರ್ ಶೆಟ್ಟಿ ನೆಯ್ಯಾಲು ಇವರ ಮನೆಯಲ್ಲಿ ನಡೆದ ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆಯಲ್ಲಿ, ನಡುವಣ ಲೋಕದಲ್ಲಿ ಅವೈದಿಕ ಪರಂಪರೆಯ ದೈವಾರಾಧನೆ ಹಾಗೂ ದೈವಾರಾಧನೆಯಲ್ಲಿ ಬಂಟರು ಎಂಬ ವಿಶೇಷ ಚರ್ಚಾಗೋಷ್ಠಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ಳಾರೆ ಬಜನಿಗುತ್ತು ಅಜಯ್ ಶೆಟ್ಟಿ ಹಾಗೂ ಗಿರೀಶ್ ಶೆಟ್ಟಿ, ಕಲ್ಮಂಜ, ಗಡಿಕಾರರು, ಭಾಗವಹಿಸಿ ದೈವದ ಆರಾಧನೆಯ ಪರಂಪರೆ ಹಾಗೂ ಪ್ರಸ್ತುತ ವಿದ್ಯಾ ಮಾನ, ಹಾದಿ ತಪ್ಪುತ್ತಿರುವ ದೈವರಾದನೆಯ ಆಚರಣೆಯ ಬಗ್ಗೆ ತಿಳಿಯಪಡಿಸಿದರು. ವೇದಿಕೆಯಲ್ಲಿ ಉಜಿರೆ ವಲಯದ ಅಧ್ಯಕ್ಷ ರಾದ ವನಿತಾ ಶೆಟ್ಟಿ, ಉಜಿರೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ. ಎ. ಕುಮಾರ್ ಹೆಗ್ಡೆ, ಉಜಿರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಪುಷ್ಪ ಆರ್. ಶೆಟ್ಟಿ, ಅಗರಿ ರಾಮಣ್ಣ ಶೆಟ್ಟಿ, ಅಗರಿ ಪುರುಷೋತ್ತಮ ಶೆಟ್ಟಿ, ಭಾಸ್ಕರ ಶೆಟ್ಟಿ ನೆಯ್ಯಾಲು, ಸುಮಾ ಕೃಷ್ಣಾನಂದ ಶೆಟ್ಟಿ, ಮುಂಡ್ರುಪ್ಪಾಡಿ ವಿಶ್ವನಾಥ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ನಾಗಂಡ ಇವರುಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ನವೀತ್ ಶೆಟ್ಟಿ, ನೆಯ್ಯಾಲು ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಜೊತೆ ಕಾರ್ಯದರ್ಶಿ ಹರ್ಷಿತ್ ಶೆಟ್ಟಿ ನೆಯ್ಯಾಲು ಸ್ವಾಗತಿಸಿ , ರಂಜಿತ್ ಶೆಟ್ಟಿ ಧನ್ಯವಾದವಿತ್ತರು.











