ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯ ಎಂಬಲ್ಲಿ ಗಂಗಯ್ಯ ಗೌಡ ರವರ ಮನೆಗೆ ಸೇರಿದ ಗಬ್ಬದ ಹಸು 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ಜ.16ರಂದು ನಡೆದಿರುತ್ತದೆ.
ಬಾವಿಗೆ ಬಿದ್ದ ಹಸುವನ್ನು ಇಂದು ಮುಂಜಾನೆ ಸ್ಕ್ರೈನ್ ಮೂಲಕ ಮೇಲಕ್ಕೆತ್ತುವ ಕೆಲಸ ನಡೆದಿದ್ದು, ಆಳಕ್ಕೆ ಬಿದ್ದ ರಭಸಕ್ಕೆ ಹಸುವಿಗೆ ಗಂಭೀರ ಗಾಯಗೊಂಡಿದ್ದು, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಕಾಶ್ ಗೌಡ, ಕರಿಯ ಮಹಮ್ಮದ್ ಶಾಫಿ, ಸಯ್ಯದ್, ಶೇಖರ್, ಪತ್ರಿಕಾ ವಿತರಕರಾದ ಬಾಲಚಂದ್ರ ನಾಯಕ್ ಹಾಗೂ ಮತ್ತಿತರರು ಸಹಕರಿಸಿದರು.











