September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕತಾರ್ ಕಕ್ಕಿಂಜೆ ಶರೀಅತ್‌ ಕಾಲೇಜು ನೂತನ ಸಮಿತಿಗೆ ಆಯ್ಕೆ

ಬೆಳ್ತಂಗಡಿ : ಕತಾರ್ ಕಕ್ಕಿಂಜೆ ಶರೀಅತ್ ಕಾಲೇಜಿನ ನೂತನ ಸಮಿತಿಯ ರಚನಾ ಸಭೆಯು ದೋಹಾದ ಐನ್‌ ಖಾಲಿದ್‌ನ ಗ್ರೀನ್ಸ್ ರೆಸ್ಟೋರೆಂಟ್ ಹಾಲ್ ನಲ್ಲಿ ನಡೆಯಿತು. ಹಂಝ ಎ.ಕೆ. ಕಿರಾಅತ್ ಪಠಿಸಿದರು. ಝನುದ್ದೀನ್ ಹಾಶಿಮಿ ಉಪನ್ಯಾಸ ನೀಡಿದರು. ಶರಿಆತ್ ಕಾಲೇಜಿನ ಸಾಧನೆ ಹಾಗೂ ಸಮಿತಿಯ ಬಗ್ಗೆ ರಶೀದ್ ಅಬ್ದುಲ್ ಹಮೀದ್ ಮಾಹಿತಿ ನೀಡಿದರು. ರಫೀಕ್ ಯು.ಪಿ. ಮುಖ್ಯ ಅತಿಥಿಯಾಗಿ ಹಮೀದ್ ಫೈಝಿ ಉಸ್ತಾದ್ ಭಾಗವಹಿಸಿದ್ದರು.

ಸಮಿತಿಯ ಕಾರ್ಯದರ್ಶಿ ಉನೈಸ್ ಬಿ.ಎಲ್. ವಾರ್ಷಿಕ ವರದಿ ವಾಚಿಸಿದರು. ರಶೀದ್ ಅಬ್ದುಲ್ ಹಮೀದ್ ನೂತನ ಸಮಿತಿಗೆ ಅಧಿಕೃತ ಚಾಲನೆ ನೀಡಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆದಮ್ ಹೈದ್ರೋಸ್ ಚಾರ್ಮಾಡಿ, ಅಧ್ಯಕ್ಷರಾಗಿ ರಫೀಕ್ ಯು.ಪಿ., ಉಪಾಧ್ಯಕ್ಷರಾಗಿ ಉನೈಜ್ ಬಿ.ಎಲ್., ಹಮೀದ್ ಸೊರಂಗ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎ.ಕೆ., ಕಾರ್ಯದರ್ಶಿಯಾಗಿ ಸಲೀಂ ಯು.ಕೆ, ಇಲ್ಯಾಸ್ ಪಿ.ಕೆ., ಕೋಶಾಧಿಕಾರಿಯಾಗಿ ಉಸ್ಥಾನ್ ಪಿ.ಕೆ., ಸಂಚಾಲಕರಾಗಿ ಝನುದ್ದೀನ್ ಹಾಶಿಮಿ ಉಸ್ತಾದ್, ಮಾಧ್ಯಮ ಪ್ರತಿನಿಧಿಯಾಗಿ ಅಜ್ಜಲ್ ರಹ್ಮಾನ್ ಹಾಗೂ ಅಂಶಾದ್ ಚಾರ್ಮಾಡಿ, ಸಲಹಾ ಸಮಿತಿಯಾಗಿ ರಶೀದ್ ಅಬ್ದುಲ್ ಹಮೀದ್, ಅಕ್ಟರ್ ಎ.ಕೆ., ಆಸೀಫ್ ಎಂ.ಎ. ಆಯ್ಕೆಯಾಗಿದ್ದಾರೆ.

Related posts

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘ ಇದರ ತಾಲೂಕು ಸಮಿತಿ ಹಾಗೂ ಗ್ರಾಮ ಸಮಿತಿಯ ಸಭೆ

Suddi Udaya

ರುದ್ರಗಿರಿಯಲ್ಲಿ ಶಿವರಾತ್ರಿಯ ತಾಳಮದ್ದಳೆ

Suddi Udaya

ಇಂದಬೆಟ್ಟು: ಬಂಗಾಡಿ ಅರಮನೆಗೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭೇಟಿ

Suddi Udaya

ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ.

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya
error: Content is protected !!