25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ ಸಿದ್ದಬೈಲ್ ಪರಾರಿ ಸ.ಹಿ.ಪ್ರಾ. ಶಾಲೆಗೆ ಯುವ ಉದ್ಯಮಿ ಮೋಹನ್ ಗೌಡರಿಂದ ಇನ್ವಾರ್ಟರ್ ಕೊಡುಗೆ

ಕಲ್ಮoಜ: ಇಲ್ಲಿಯ ಸಿದ್ದಬೈಲ್ ಪರಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ, ಕರ್ನಾಟಕ ಸಾವಯವ ಕೃಷಿ ಯೋಜನೆ ರಾಜ್ಯ ಆಡಳಿತ ನಿರ್ದೇಶಕ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಮೋಹನ ಗೌಡ ಕಲ್ಮoಜ ರವರಿಂದ ರೂ.25 ಸಾವಿರ ಮೌಲ್ಯದ ಇನ್ವಾರ್ಟರ್ ಕೊಡುಗೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮೋಹನ ಗೌಡ ರವರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ ಬಗ್ಗೆ ಮಕ್ಕಳ ಶಿಕ್ಷಣ ಅಧ್ಯಾಪಕರ ಬಗ್ಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾನು ಈ ಶಾಲೆಯಲ್ಲಿ ಕಲಿತು ರಾಜ್ಯಮಟ್ಟದ ಉದ್ಯಮಿ ಆಗಿದ್ದೇನೆ ರಾಜಕೀಯ ಸಾಮಾಜಿಕ ಕೃಷಿ, ಧಾರ್ಮಿಕ ಸೇವಾ ಸಂಘಟನೆಯಲ್ಲಿ ತೊಡಗಿಸಲು ಪ್ರೇರಣೆ ಸಿದ್ದಬೈಲ್ ಪರಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗಾಗಿ ಸಂವಿಧಾನ ದಿನ ವಾದ ಗಣರಾಜ್ಯ ದಿನ ನಮ್ಮ ಶಾಲೆಗೆ ಏನಾದ್ರು ಕೊಡುಗೆ ನೀಡಬೇಕು ಎನ್ನುವ ಆಶಯ ಮತ್ತು ನಮ್ಮ ಶಾಲೆ ಸದಾ ನಮ್ಮೊಂದಿಗೆ ಉಳಿಯಬೇಕು. ಸಮಾಜದಲ್ಲಿ ಸಾಧನೆ ಮಾಡುವ ಪ್ರತಿಯೊಬ್ಬ ಸಾಧಕನ ಹಿಂದೆ ನಮ್ಮ ಸರಕಾರಿ ಕನ್ನಡ ಶಾಲೆಯ ಅಧ್ಯಾಪಕರ ಪಾತ್ರ ದೊಡ್ಡದು ಎಂದು ಹೇಳಿದರು.

ಶಾಲಾ ಸಮಿತಿಯಿಂದ ಹಳೆ ವಿದ್ಯಾರ್ಥಿ ಮೋಹನ್ ಗೌಡರ ಸಾಧನೆಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಎಲ್ಲಾ ಶಿಕ್ಷಕರು, ಶಾಲಾಭಿರುದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಊರಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Related posts

ಅಪರ ಜಿಲ್ಲಾಧಿಕಾರಿಯಾಗಿ ಡಾ. ಸಂತೋಷ್ ಕುಮಾರ್ ಅಧಿಕಾರ ಸ್ವೀಕಾರ

Suddi Udaya

ಉಜಿರೆ ಶ್ರೀಶಾರದಾ ಪೂಜೋತ್ಸವ :ಕೃತಜ್ಞತಾ ಸಭೆ

Suddi Udaya

ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ: ದೂರುದಾರ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ ಎಸ್ಐಟಿ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು: ರಾ. ಸೇ. ಯೋಜನೆಯ ನೂತನ ಸಲಹಾ ಸಮಿತಿ ರಚನೆ

Suddi Udaya

ಮಾಲಾಡಿ ಬಿ ಎಂ ಆಟೋ ಚಾಲಕ ಮಾಲಕರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪೂರ್ವಭಾವಿ ಸಭೆ

Suddi Udaya
error: Content is protected !!