July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಇನಾರ ಡೆಂಟಲ್ ಕೇರ್ ದಂತ ಚಿಕಿತ್ಸಾಲಯ ಶುಭಾರಂಭ

ಉಜಿರೆ : ಉಜಿರೆ ಮುಖ್ಯ ರಸ್ತೆಯ ಶಿವ ಕೃಪಾ ಕಟ್ಟಡ, ಅಪೋಲೋ ಫಾರ್ಮಸಿ ಬಳಿ ನೂತನ ದಂತ ಚಿಕಿತ್ಸಾಲಯ ಫೆ. 9 ರಂದು ಶುಭಾರಂಭಗೊಂಡಿತು.

ನೂತನ ದಂತ ಚಿಕಿತ್ಸಾಲಯವನ್ನು ಅಸ್ಸಯ್ಯಿದ್ ಕೆ.ಪಿ.ಎಸ್ ಝೖನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ರವರು ದುಆ ನೆರೆವೇರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಸಿಪಿಎಮ್ ಪಕ್ಷದ ಮುಖಂಡರು ಬಿ. ಎಂ ಭಟ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಬೆಳ್ತಂಗಡಿ ಖಿಲರ್ ಜುಮಾ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್, ಖ್ಯಾತ ಯುಟ್ಯೂಬರ್ ಶ್ಯಾಮ್, ಉದ್ಯಮಿಗಳಾದ ಹನೀಫ್ ಉಜಿರೆ, ಮೊಹಮ್ಮದ್ ಅಲಿ, ಕರಾಟೆ ತರಬೇತುಗಾರ ರಹ್ಮಾನ್ ಹಾಗೂ ಇತರರು ಉಪಸ್ಥಿತರಿದ್ದರು.

ಮಾಲಕರಾದ ಡಾ. ಸಿನಾನ್ ಹಾಗೂ ಅವರ ತಂದೆಯವರಾದ ಪಿಹೆಚ್ ಹಸೈನಾರ್ ಹಾಜಿ ಕಕ್ಕಿಂಜೆ ರವರು ಸ್ವಾಗತಿಸಿ, ವಂದಿಸಿದರು.

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

Suddi Udaya

ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ; ಸನ್ಮಾನ

Suddi Udaya

ಅಭ್ಯಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫಾಕ್-೨೦೨೬

Suddi Udaya

ಪುತ್ತೂರಿನಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೋಟ್ಟುರವರಿಗೆ ಅಭಿವಂದನಾ ಕಾರ್ಯಕ್ರಮ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ವಕ್ಫ್ ಜಾಗೃತಿ ಸಭೆ ಕಾರ್ಯಕ್ರಮ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ದಾ ಶೆಟ್ಟಿ ಎಣಿoಜೆ ರವರಿಗೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಹಾಗೂ ಭಕ್ತಿ ಹೆಜ್ಜೆ ಬಳಗದಿಂದ ಸನ್ಮಾನ

Suddi Udaya
error: Content is protected !!