ಮೂಡುಕೋಡಿ: ಮೂಡುಕೋಡಿ ಅಮೃತಧಾರಾ ಹಾಲು ಉತ್ಪಾದಕರ ಸಹಕಾರಿ ಸಂಘದ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರು, ನಿವೃತ್ತ ಶಿಕ್ಷಕ ಪಿ.ಎನ್ ಪುರುಷೋತ್ತಮ ರಾವ್ ಮತ್ತು ಉಪಾಧ್ಯಕ್ಷರಾಗಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಉಪನ್ಯಾಸಕರಾಗಿರುವ ರಾಕೇಶ್ ಕುಮಾರ್ ಮೂಡುಕೋಡಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಪ್ರಕಾಶ್ ಭಟ್, ಪ್ರಶಾಂತ್ ಗೌಡ ಮಾಡೆಂಜ, ವಾಸು ಪೂಜಾರಿ ಕೊಳಂಗಜೆಗುತ್ತು, ಸದಾನಂದ ಪೂಜಾರಿ ಕೆರೆಮನೆ, ಸಂತೋಷ್ ಹೆಗ್ಡೆ ಪರಾರಿ, ಲಕ್ಷö್ಮಣ ಪೂಜಾರಿ ಅರ್ಬು, ಕರಿಯ ಮುಗೇರ, ವಿಶಾಲಾಕ್ಷಿ ಹೆಗ್ಡೆ, ಲೂಯಿಸ್ ಡಿಸೋಜ, ಶಾಂತ ಪೂಜಾರಿ, ಹರಿಣಾಕ್ಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯನ್ನು ಬೆಳ್ತಂಗಡಿ ಸಹಕಾರಿ ಸಂಘಗಳ ರಿಟರ್ನಿಂಗ್ ಅಧಿಕಾರಿ ಸುಕನ್ಯಾ ನೆರವೇರಿಸಿದರು.











