ಉರುವಾಲು : ಶ್ರೀ ಮಹಮ್ಮಾಯಿ ದೇವಸ್ಥಾನ ಶಿವಾಜಿ ನಗರ ಉರುವಾಲು ಪದವು ಇಲ್ಲಿಯ ಮಾರ್ಚ್ ತಿಂಗಳಲ್ಲಿ ನಡೆಯುವ ಪುನರ್ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ, ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷರಾದ ಚೆನ್ನಕೇಶವ ನಾಯ್ಕ ಅರಸರ ಮಜಲು, ರಾಘವ ನಾಯ್ಕ ಕಾಯರ್ಪಾಡಿ, ಮಾರಾಟಿ ಸಂಘದ ಅಧ್ಯಕ್ಷರಾದ ಸೀತಾರಾಮ ನಾಯ್ಕ ಅರ್ಬಿ, ಸಂಘದ ಕಾರ್ಯದರ್ಶಿ ಉಮೇಶ ನಾಯ್ಕ ಎಂಜಿರಪಳಿಕೆ, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ನಾಯ್ಕ ಕಲ್ಲಂಡ, ರಾಜೇಶ್ ನಾಯ್ಕ ಕೊರಿಂಜ, ಗಣೇಶ್ ನಾಯ್ಕ ಹಲೇಜಿ,ಸತೀಶ್ ನಾಯ್ಕ ಹಲೇಜಿ, ಉಪಸ್ಥಿತರಿದ್ದರು.











