ಬೆಳ್ತಂಗಡಿ: ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ವಸಿಷ್ಠರು ಗುರುಕುಲ ನಡೆಸುತಿದ್ದ ಅಯೋಧ್ಯೆಯ ಭರತಕುಂಡದಲ್ಲಿರುವ ಪುರಾತನ ಶಿವ ದೇವಾಲಯದಲ್ಲಿ 1008 ಮಹಾಮಂಡಲೇಶ್ವರ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭರತ್ ಕುಂಡದ ಗುರುಗಳಾದ ಶ್ರೀ ರಾಮ್ ನಾರಾಯನ್ ದಾಸ್ ಉಪಸ್ಥಿತರಿದ್ದರು ಹಾಗೂ ರಾಮಕ್ಷೇತ್ರದ ಟ್ರಸ್ಟಿಗಳಾದ ತುಕಾರಾಮ್ ಸಾಲಿಯಾನ್, ರವೀಂದ್ರ ಪೂಜಾರಿ, ಎಂಜಿನಿಯರ್ ರಾಹುಲ್ ಹಾಗೂ ಸ್ವಾಮೀಜಿಯವರ ಅಯೋಧ್ಯೆಯ ಶಿಷ್ಯಂದಿರು ಭಕ್ತಾದಿಗಳು ಜೊತೆಗಿದ್ದರು.











