24.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜಾಗತಿಕ ಹಾದಿಯಲ್ಲಿ ಅಗ್ರಿಲೀಫ್‌ಗೆ ಭಾರೀ ಬಲ: ರೂ.10 ಕೋಟಿ ನಿಧಿ ಸಂಗ್ರಹ — ಭಾರತ ಮತ್ತು ಯುರೋಪ್–ಯುಕೆ ವಿಸ್ತರಣೆಗೆ ವೇಗ

ಬೆಳ್ತಂಗಡಿ: ಅಗ್ರಿಲೀಫ್‌ ತನ್ನ ವಿಸ್ತರಣಾ ಯೋಜನೆಯ ಭಾಗವಾಗಿ ರೂ. 10 ಕೋಟಿ ಹೂಡಿಕೆಯನ್ನು ಯಶಸ್ವಿಯಾಗಿ ಪಡೆದಿದೆ. ಈ ಮೊತ್ತವನ್ನು ಅಡಿಕೆ ಹಾಳೆಗಳಿಂದಲ್ಲೇ ತಯಾರಿಸಿದ ಫುಡ್ ಟೇಕ್-ಅವೇ ಬೌಲ್ ವಿಭಾಗದ ವಿಸ್ತರಣೆ, ಹೊಸ ಉತ್ಪನ್ನಗಳ ಪರಿಚಯ, ಭಾರತ ಮಾರುಕಟ್ಟೆಯ ಬಲಪಡಿಕೆ ಹಾಗೂ ಯುರೋಪ್ ಮತ್ತು ಯುನೈಟೆಡ್ ಕಿಂಗ್‌ಡಮ್ ಮಾರುಕಟ್ಟೆಗಳಿಗೆ ಭೌಗೋಳಿಕ ವಿಸ್ತರಣೆಗೆ ಬಳಸಲಾಗುತ್ತದೆ.

ಈ ಹೂಡಿಕೆ ಸುತ್ತಿನಲ್ಲಿ ಬರೋಡಾದ ಉದ್ಯಮಿ ಹಾಗೂ ಕ್ಯಾಟರಿಂಗ್ ಕ್ಷೇತ್ರದ ವ್ಯಾಪಾರಿಯಾದ ಶಶಿಧರ ಶೆಟ್ಟಿ ಭಾಗವಹಿಸಿದ್ದು, ಆಗ್ರಿಲೀಫ್‌ನ ಪ್ರಮುಖ ವಿಸ್ತರಣಾ ಯೋಜನೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಇದಲ್ಲದೆ, ಈಗಾಗಲೇ ಕಂಪನಿಯಲ್ಲಿ ಹೂಡಿಕೆ ಮಾಡಿರುವ Capital A ಮತ್ತು Samrsh Capital ಸಂಸ್ಥೆಗಳೂ ಈ ಹೂಡಿಕೆ ಸುತ್ತಿನಲ್ಲಿ ಪುನಃ ಭಾಗವಹಿಸಿ ತಮ್ಮ ವಿಶ್ವಾಸವನ್ನು ಮತ್ತಷ್ಟು ದೃಢಪಡಿಸಿವೆ.

ಕಳೆದ ವರ್ಷ ಝೊಮ್ಯಾಟೊ ಜೊತೆಗೆ ಟೇಕ್-ಅವೇ (Food parcel) ವಿಭಾಗದಲ್ಲಿ ಪಡೆದ ಯಶಸ್ಸು ಕಂಪನಿಯ ಬೆಳವಣಿಗೆಗೆ ಮತ್ತಷ್ಟು ಬಲ ನೀಡಿದೆ. ಭಾರತದಲ್ಲಿ ಪ್ರಮುಖ ಆಹಾರ ಸರಪಳಿಗಳು ಮತ್ತು ರೀಟೇಲ್ ಮಾರುಕಟ್ಟೆಗಳಲ್ಲಿ ವಿಸ್ತರಿಸುವುದರೊಂದಿಗೆ, ಯುರೋಪ್ ಮತ್ತು ಯುಕೆ ಮಾರುಕಟ್ಟೆಗಳಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ.

ಪ್ಲಾಸ್ಟಿಕ್ ರಹಿತ ಪರ್ಯಾಯಗಳಿಗೆ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ, ಪರಿಸರ ಸ್ನೇಹಿ ಹಾಗೂ ನವೀನ ಆಹಾರ ಪ್ಯಾಕೇಜಿಂಗ್ ಪರಿಹಾರಗಳನ್ನು ಒದಗಿಸುವುದು ಆಗ್ರಿಲೀಫ್‌ನ ದೃಷ್ಟಿಯಾಗಿದೆ.

ಜಾಗತಿಕ ಮಟ್ಟದ, ಪರಿಸರ ಸ್ನೇಹಿ ಪರಿಹಾರಗಳನ್ನು ನಿರ್ಮಿಸುವುದು ನಮ್ಮ ಬದ್ಧತೆ: ಅವಿನಾಶ್ ರಾವ್

“ಜಾಗತಿಕ ಮಾರುಕಟ್ಟೆಯಲ್ಲಿ ಆಗ್ರಿಲೀಫ್‌ನ ಸ್ಥಾನಮಾನಕ್ಕೆ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿರುವುದಕ್ಕೆ ಈ ನಿಧಿ ಸಂಗ್ರಹ ಸಾಕ್ಷಿಯಾಗಿದೆ. ನಮ್ಮ ನವೀನ ಉತ್ಪನ್ನಗಳು ಹಾಗೂ ಟೇಕ್-ಅವೇ ಬೌಲ್ ವಿಭಾಗದಲ್ಲಿ — ವಿಶೇಷವಾಗಿ ಝೊಮ್ಯಾಟೊ ಜೊತೆಗೆ ಕಳೆದ ವರ್ಷದ ಯಶಸ್ಸು — ನಮ್ಮ ಕಾರ್ಯತಂತ್ರವನ್ನು ದೃಢಪಡಿಸಿದೆ. ಜಾಗತಿಕ ಮಟ್ಟದ, ಪರಿಸರ ಸ್ನೇಹಿ ಪರಿಹಾರಗಳನ್ನು ನಿರ್ಮಿಸುವುದು ನಮ್ಮ ಬದ್ಧತೆ.”

ಹೊಸ ಮಾರುಕಟ್ಟೆಗಳಲ್ಲಿ ವೇಗ ಮತ್ತು ಪ್ರಮಾಣದೊಂದಿಗೆ ಆಗ್ರಿಲೀಫ್ ತನ್ನ ಸ್ಥಾನವನ್ನು ಸ್ಥಾಪಿಸಿದೆ: ಅತಿಶಯ ಜೈನ್

ಹೊಸ ಮಾರುಕಟ್ಟೆಗಳಲ್ಲಿ ವೇಗ ಮತ್ತು ಪ್ರಮಾಣದೊಂದಿಗೆ ಆಗ್ರಿಲೀಫ್ ತನ್ನ ಸ್ಥಾನವನ್ನು ಸ್ಥಾಪಿಸಿರುವುದು ಶ್ಲಾಘನೀಯ. ಜಾಗತಿಕ ಟ್ಯಾರಿಫ್ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಯುರೋಪ್ ಮತ್ತು ಯುಕೆ ಮಾರುಕಟ್ಟೆಗಳಲ್ಲಿ ಹೊಸ ಗ್ರಾಹಕರನ್ನು ಗಳಿಸಿರುವುದು ಕಂಪನಿಯ ಸಾಮರ್ಥ್ಯವನ್ನು ತೋರಿಸುತ್ತದೆ. ಹೊಸ ತಂತ್ರಜ್ಞಾನಗಳ ಅಳವಡಿಕೆ ಮುಂದಿನ ಹಂತದ ಬೆಳವಣಿಗೆಗೆ ಮಹತ್ತರ ಬಲವಾಗಲಿದೆ, ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿಯನ್ನು ನೀವು ನೋಡಲಿದ್ದೀರಿ.

Related posts

ಮಡಂತ್ಯಾರು ನಲ್ಲಿ ಅಮಿತ್ ಶಾ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಧರ್ಮಸ್ಥಳ : ಹಾವು ಕಡಿದು ಮಹಿಳೆ ಸಾವು

Suddi Udaya

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರಿಗೆ ಬೆಹರೀನ್ ಬಿಲ್ಲವಾಸ್ ಮತ್ತು ಬೆಹರೀನ್ ಕನ್ನಡ ಸಂಘದಿಂದ ಸಾವಿರಾರು ಜನರ ಸಮ್ಮುಖದಲ್ಲಿ, ವಿಜೃಂಭಣೆಯ “ಗುರು ವಂದನೆ” ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲು: ಬೆಳ್ತಂಗಡಿಯ ಮೂವರು ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿಯಿಂದ ಕಾರಣ ಕೇಳಿ ನೋಟೀಸ್

Suddi Udaya

ನಡ ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!