ಉಜಿರೆ: ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಶಿವರಾತ್ರಿ ಹಬ್ಬವನ್ನು ಆರಿಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಎಸ್ ಡಿ ಎಂ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶೈಲೇಶ್ ರವರು ಮಾತನಾಡುತ ರತ್ನಮಾನಸದ ವಿದ್ಯಾರ್ಥಿಗಳು ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಈಗಿನ ರತ್ನಮಾನಸವು ಸಾಕಷ್ಟು ಬದಲಾವಣೆಗೊಂಡಿದೆ. ಶಿವರಾತ್ರಿಯಲ್ಲಿ ನಾವು ಶಿವನಾಮ ಸಂಕೀರ್ತನೆಯನ್ನು ಮಾಡುವುದರ ಮೂಲಕ ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬಹುದು ಈ ಮೂಲಕ ಲೋಕಕ್ಕೆ ಹಿತವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ಹಾಗೂ ಅಧ್ಯಾಪಕರಾದ ರವಿಚಂದ್ರ, ಉದಯರಾಜ್ , ದೀಪಕ್ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ಶಿವ ನಾಮ ಸಂಕೀರ್ತನೆಯೊಂದಿಗೆ ಜಾಗರಣೆ ಮಾಡಲಾಯಿತು.











