ನೆರಿಯ: ಫೆ.22ರಂದು ನಿಗದಿಯಾಗಿದ್ದ ಸಾಮಾನ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಾಗಿದ್ದ ಸ್ಥಾನದಿಂದ ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷ ಅವಧಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದಿದೆ.
ತಾರನಾಥ ಎಂ, ಬಾಲಕೃಷ್ಣ ಗೌಡ, ವಿಮಲಾ, ಲೀಲಾಧರ ಎ.ಎಸ್, ಶೋಭಾ ಪಿ.ಎಸ್ ಮನೋರಮಾ ಹಾಗೂ ಸೇವಾ ಭಾರತಿಯಿಂದ ಸರಸ್ವತಿ ಎ, ಸಜಿತ ಲೋಕೇಶ್ ಎ.ಸಿ ನಾಗೇಶ್ ಲೋಕೇಶ್ ಕೆ ಸಂಧ್ಯಾ ಸುಂದರ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸೇವಾ ಭಾರತೀಯ ಬೆಂಬಲಿತ ಅಭ್ಯರ್ಥಿಯಾದ ಸರಸ್ವತಿ ಎ ಅಧ್ಯಕ್ಷರಾಗಿ ಸಜಿತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ರಿಟನಿಂಗ್ ಅಧಿಕಾರಿಯಾಗಿ ಪ್ರತಿಮಾ, ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಬಿಎಂ ಶರೀಫ್ ಸಿಬ್ಬಂದಿಗಳು ಸಹಕರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಉಜಿರೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಯಶವಂತ ಗೌಡ, ನೆರಿಯ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಶ್ವನಾಥ್ ಗೌಡ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಕೆಎಸ್ ರಾಮಕೃಷ್ಣ ಗೌಡ ಸಂಜೀವ ಗೌಡ ಉಪಸ್ಥಿತರಿದ್ದರು.











