ಬೆಳ್ತಂಗಡಿ : ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ದೆಯಿಂದ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಇವರಿಗೆ ಹೂಗುಚ್ಛ ಕೊಟ್ಟು ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.
ಇವರು ಸ್ಕೌಟ್ ಗೈಡ್ಸ್ ಗೆ ನೀಡಿದಂತಹ ಸಹಕಾರ ಅಮೂಲ್ಯವಾದುದು. ಪ್ರತಿ ಕಾರ್ಯಕ್ರಮದಲ್ಲೂ ಶಿಕ್ಷಣಾಧಿಕಾರಿಗಳ ಸಲಹೆ ಸೂಚನೆ, ಮಾರ್ಗದರ್ಶನವಿತ್ತು. ಇವರಿಗೆ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಪೂಜಾರಿ, ಸ್ಕೌಟ್ ಗೈಡ್ಸ್ ಶಿಕ್ಷಕರಾದ ಅಮೀತಾ, ರಮ್ಯಾ ಬಿ ಎಸ್, ಕಾರುಣ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.











