September 6, 2026
Uncategorized

ಶಿಬಾಜೆ ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಶಿಬಾಜೆ: ಫೆ.26ರಿಂದ 28ರವರೆಗೆ ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಫೆ.26ರಂದು ಸಂಜೆ ತೋರಣ ಮುಹೂರ್ತ, ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪದರಾಸಾದ ಶುಧ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ ನಡೆಯಿತು.

ಫೆ.27ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬ ಶುದ್ಧಿ, ಕಲಶ ಪೂಜೆ, ಚಂಡಿಕಾ ಹೋಮ ಪ್ರಾರಂಭ, ಹೊರೆಕಾಣಿಕೆ ಸಮರ್ಪಣೆ, ಚಂಡಿಕಾ ಹೋಮ ಪೂರ್ಣಾಹುತಿ, ಸುವಾಸಿನಿ ಪೂಜೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ ಅಂಗನವಾಡಿ, ಶಿಬಾಜೆ ಶಾಲಾ ವಿದ್ಯಾರ್ಥಿಗಳಿಂದ, ಸ್ಥಳೀಯ ಮಕ್ಕಳಿಂದ “ಸಾಂಸ್ಕೃತಿಕ ಕಾರ್ಯಕ್ರಮ”, ರಾತ್ರಿ ಶ್ರೀಪ್ರದಾ ಮತ್ತು ಶ್ರೀರಕ್ಷಾ ಬಟ್ಟಾಜೆ ನಾಟ್ಯಧಾರಾ ಮತ್ತು ತಂಡದಿಂದ “ಭರತನಟ್ಯಾ ಕಾರ್ಯಕ್ರಮ”, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆಗಳು, ಅಷ್ಠ ಸೇವೆ, ಅಶ್ವತ್ಥ ಕಟ್ಟೆ ಉತ್ಸವ, ಶ್ರೀ ದುರ್ಗಾಪಮೇಶ್ವರೀ ಭಜನಾ ಮಂಡಳಿ ಶಿಬಾಜೆ ಇದರ ಮಹಿಳಾ ಸದಸ್ಯೆಯರಿಂದ ವಿ.ಎನ್ ಕುಲಾಲ್ ವೇಣೂರು ವಿರಚಿತ ತ್ಯಾಂಪಣ್ಣ ಶೆಟ್ಟಿಗಾರ್ ಪೆರ್ಲ ಇವರ ನಿರ್ದೇಶನದಲ್ಲಿ ತುಳು ಸಾಂಸಾರಿಕ “ನಾಟಕ ದೇವೆರ್ ಕೈ ಬುಡ್ವೇರಾ?…….” ನಡೆಯಿತು.

ಫೆ.28ರಂದು ಬೆಳಿಗ್ಗೆ ಕಲಶ ಪೂಜೆ, ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಅರ್ಚನ ಮತ್ತು ತಂಡದವರಿಂದ “ನೃತ್ಯ ಪ್ರದರ್ಶನ” ರಾತ್ರಿ ರಂಗಪೂಜೆ, ದೀಪ್ತಿ ಇವರಿಂದ “ಭರತನಾಟ್ಯ ಕಾರ್ಯಕ್ರಮ”, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಭಂಡಿಹೊಳೆ ಇವರಿಂದ “ಕಂಸವಧೆ – ಪಂಚಜನ ಮೋಕ್ಷ” ಯಕ್ಷಗಾನ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಶ್ರೀಧರ್ ರಾವ್ ಅಜಿರಡ್ಕ ಮತ್ತು ಸದಸ್ಯರು, ಸಿಬ್ಬಂದಿ ವರ್ಗ, ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಮೇ 23 ಕುತ್ಲುರು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಸ್ತಾಂತರ ಕಾರ್ಯಕ್ರಮ

Suddi Udaya

ತೀರ ಬಡತನದ ಕುಟುಂಬಕ್ಕೆ ಸಹಾಯಹಸ್ತ ನೀಡಿದ ಧಾರ್ಮಿಕ ಮುಖಂಡ ಪುಷ್ಪಗಿರಿ

Suddi Udaya

ಎಸ್ ಎಸ್ ಎಲ್ ಸಿ: ರಾಜ್ಯಕ್ಕೆ 4 ಸ್ಥಾನ. ಪಡೆದಿರುವ ಚಿರಾಗ್ ನಾಯಕ್ ನನ್ನು ಶಾಲಾ ಶಿಕ್ಷಣ ಇಲಾಖೆಯಿಂದಸನ್ಮಾನ

Suddi Udaya

ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ : ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ: ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಜನಾ ಪುಸ್ತಕ ಬಿಡುಗಡೆ

Suddi Udaya

ಮಡಂತ್ಯಾರು ವಲಯದ ಮಚ್ಚಿನ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!