ವೇಣೂರು: ಬಜಿರೆ ಗ್ರಾಮದ ಸುರಭಿ ಮನೆ ಬಿ. ರತ್ನವರ್ಮ ಇಂದ್ರ (80ವ) ರವರು ಮಾ.3ರಂದು ರಾತ್ರಿ ನಿಧನರಾದರು.
ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಇವರು ವೇಣೂರು ಮಂಡಲ ಪ್ರಧಾನರಾಗಿ, ವೇಣೂರು ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ, ವೇಣೂರು ಜೈನ್ ಮಿಲನ್ ಅಧ್ಯಕ್ಷರಾಗಿ, ದಿಗಂಬಗರ ಜೈನ ತೀರ್ಥ ಕ್ಷೇತ್ರ ಸಮಿತಿ ಕೋಶಾಧಿಕಾರಿಯಾಗಿದ್ದರು. 2013 ಮಹಾಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿಯಾಗಿ, 2014 ರ ಉಪಾಧ್ಯಕ್ಷರಾಗಿ ದುಡಿದು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ್ದರು.
ಮೃತರು ಉಜಿರೆ ಎಸ್ಡಿಎಂ ಕಾಲೇಜಿನ ಪಿಯು ಪ್ರಾಂಶುಪಾಲ ಪ್ರಮೋದ್ ಕುಮಾರ್, ಮೂಡಬಿದಿರೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಕುಮಾರ್ ಸೇರಿದಂತೆ ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.











