23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು

ಲಾಯಿಲ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಲಾಯಿಲ ಮಹಿಳಾ ಬಿಲ್ಲವ ವೇದಿಕೆ ಲಾಯಿಲ ಮತ್ತು ಯುವ ಬಿಲ್ಲವ ವೇದಿಕೆ ಲಾಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು ಎಂಬ ಕೆಸರಿನ ಕ್ರೀಡಾಕೂಟವು ಇತ್ತೀಚೆಗೆ ಲಾಯಿಲ ಗ್ರಾಮದ ಹಂದೆವೂರು ಬೊಟ್ಟು ಎಂಬಲ್ಲಿ ನಡೆಯಿತು.

ಬೆಳಿಗ್ಗೆ ಕೈಪ್ಲೋಡಿಯ ಕೃಷ್ಣಪ್ಪ ಪೂಜಾರಿಯವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕಂಬಳದ ಕೋಣಗಳನ್ನು ಬ್ಯಾಂಡ್ ವಾಲಗದ ಮೂಲಕ ಗದ್ದೆಗೆ ಇಳಿಸಿ, ಉಳುಮೆ ಮಾಡಿ, ಕೋಳಿ ಅಂಕದ ಪ್ರಾತಕ್ಷಿಕೆ ನಡೆಸಲಾಯಿತು. ಹಿರಿಯರಾದ ದರ್ಖಾಸು ಸಂಜೀವ ಪೂಜಾರಿಯವರು ಗದ್ದೆಗೆ ಹಾಲು, ತುಪ್ಪ, ಎಳನೀರನ್ನು ಎರೆಯುವ ಮೂಲಕ ಕೆಸರಿನ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಮಧ್ಯಾಹ್ನ ಬಿ ಲಕ್ಷ್ಮಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ., ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಶ್ರೀಮತಿ ಸುಮತಿ ಪ್ರಮೋದ್, ಎಂ. ಕೆ. ಪ್ರಸಾದ್, ಗುರುರಾಜ್ ಗುರಿಪಳ್ಳ ಹಾಗೂ ಸಂಘದ ನಿರ್ದೇಶಕರು ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಸಂತ್ ಸುವರ್ಣ ಲಾಯಿಲ, ಬಹುಮಾನ ವಿತರಕರಾಗಿ ಶೈಲೇಶ್ ಆರ್. ಜೆ. ಭಾಗವಹಿಸಿದ್ದರು. ಕಾರ್ಯದರ್ಶಿ ಸೌಮ್ಯ ಲಾಯಿಲ ಸ್ವಾಗತಿಸಿ, ಸ್ನೇಕ್ ಅಶೋಕ್ ವಂದಿಸಿದರು. ಜಯಾನಂದ ಅಂಕಾಜೆಯವರು ನಿರೂಪಿಸಿದರು.

Related posts

ಎ.25: ಮರೋಡಿ ದೇವಸ್ಥಾನ: ಪ್ರತಿಷ್ಠಾ ಮಹೋತ್ಸವ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಉದ್ಘಾಟನೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕರ್ತವ್ಯದ ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ ಆರೋಪ: ಇಬ್ಬರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಪಯಾ೯ಯ ಪೀಠಾರೋಹಣ ಗೈಯ್ಯಲಿರುವ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!