ವೇಣೂರು: ಸಾಧನಶ್ರೀ ಮಹಿಳಾ ಮಂಡಳಿ ಪಡ್ಡಂದಡ್ಕ ಇದರ ಆಶ್ರಯದಲ್ಲಿ ಮಂಜುಶ್ರಿ ಭಜನಾ ಮಂಡಳಿ ಪಡ್ಡಂದಡ್ಕದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಭಾ ಅರುಣ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿ ಮಹಿಳಾ ಮಂಡಲದ ಕಾರ್ಯದರ್ಶಿ ನಳಿನಾಕ್ಷಿ ಸುಧಾಕರ್ ಮಹಿಳಾ ಶಕ್ತಿಯ ,ಸಂಘಟನೆಯ ಕುರಿತು ಕೆಲವು ತಾತ್ವಿಕ ಕಥೆಗಳನ್ನು ಹೇಳುವ ಮೂಲಕ ಮಹಿಳೆಯರ ಹಕ್ಕು ಕರ್ತವ್ಯಗಳ ಮಾತನಾಡಿದರು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಯಂತಿ ಹೆಗ್ಡೆ ಸ್ವಾಗತಿಸಿ, ಮಂಜುಳಾ ವಂದಿಸಿದರು. ರೇಷ್ಮಾ ಮತ್ತು ಅಶ್ವಿನಿ ನಿರೂಪಿಸಿದರು.













