ಶಿಬಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶಿಬಾಜೆ ಕಾರ್ಯಕ್ಷೇತ್ರದ ತ್ರೈಮಾಸಿಕ ಒಕ್ಕೂಟ ಸಭೆಯಲ್ಲಿ ಹಾವುಗಳನ್ನು ಗುರುತಿಸುವಿಕೆ ಮನ್ನೆಚ್ಚರಿಕೆ ಹಾಗೂ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ ಅರಸಿನಮಕ್ಕಿ ಇದರ ಸದಸ್ಯ ರಮೇಶ ಬೈರಕಟ್ಟರವರು ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಉರಗ ರಕ್ಷಕ ಸುರೇಶ್ ಶಿಬಾಜೆ ಇವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿಬಾಜೆ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಟಿ.ಆರ್., ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಎಚ್.ಎಸ್. ಚೆನ್ನಪ್ಪಗೌಡ ,ವಲಯಾಧ್ಕಕ್ಷ ಗಣೇಶ್ ಗೌಡ, ವಲಯ ಮೇಲ್ವಿಚಾರಕಿ ಶಶಿಕಲಾ, ಬೆಳ್ತಂಗಡಿ ತಾಲೂಕು ಶೌರ್ಯ ಮಾಸ್ಟರ್ ಅವಿನಾಶ್ ಭಿಡೆ, ಶಿಶಿಲ ಆರಸಿನಮಕ್ಕಿ ಶೌರ್ಯ ಸಂಯೋಜಕಿ ರಶ್ಮಿತಾ ಟಿ.ಬಿ., ಶಿಬಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯೋಗೀಶ್ ಗ್ರಾಹಕ ಸೇವಾಕೇಂದ್ರದ ದಿವ್ಯಾ ಹಾಗೂ ಒಕ್ಕೂಟ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉದ್ದೇಶ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.ವಿಷರಹಿತ ಹಾಗೂ ವಿಷಪೂರಿತ ಹಾವುಗಳ ಗುರುತಿಸುವಿಕೆ ಕುರಿತು ಸಚಿತ್ರ ವಿವರಣೆ ನೀಡಲಾಯಿತು.
ಹಾವುಗಳು ಮನೆಯೊಳಗೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪ್ರಥಮ ಚಿಕಿತ್ಸಾ ಮಾಹಿತಿಯನ್ನು ನೀಡಲಾಯಿತು.












