September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಾ 11: ಉಜಿರೆ ಬ್ರಹ್ಮಕಲಶೋತ್ಸವ: “ಧರ್ಮಯಾನ “ಐತಿಹಾಸಿಕ ಶೋಭಾಯಾತ್ರೆ-ಪ್ರಚಾರ ವಾಹನ ಅಭಿಯಾನಕ್ಕೆ ಚಾಲನೆ

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸು ಸಂದರ್ಭದಲ್ಲಿ ಮಾ 11 ರಂದು ಸಂಜೆ ಉಜಿರೆಯ ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ ” ನಡೆಯಲಿದ್ದು ಅದರ ಪ್ರಚಾರವಾಹನ ಅಭಿಯಾನಕ್ಕೆ ಮಾ 7 ರಂದು ಮದ್ಯಾಹ್ನ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಶುಭ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್,ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ, ಧರ್ಮಯಾನ ಶೋಭಾಯಾತ್ರೆಯ ಸಂಯೋಜಕ, ಪ್ರಧಾನ ಸಂಚಾಲಕ ಕೆ. ಮೋಹನ ಕುಮಾರ್ ,ಕೆ.ಮೋಹನ ಶೆಟ್ಟಿಗಾರ್, ರವೀಂದ್ರ ಶೆಟ್ಟಿ ಸುರಭಿ, ಚಿತ್ರೇಶ್ ಶೆಟ್ಟಿ, ರವಿಕುಮಾರ್ ಬರಮೇಲು , ಡಾ. ಶ್ರೀಧರ ಭಟ್, ಮಂಜುನಾಥ ಕಾಮತ್, ಪ್ರಸಾದ್ ಬಿ ಎಸ್, ದಿನೇಶ್ ಕೋಟಿಯಾನ್, ವಿಶ್ವನಾಥ್ ಶೆಟ್ಟಿ, ದೇವಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಧರ್ಮದ ನೆಲೆಬೀಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ!ಡಿ ವೀರೇಂದ್ರ ಹೆಗ್ಗಡೆಯವರು ಧರ್ಮದೇವತೆಗಳ ಪ್ರತಿನಿಧಿಯಾಗಿ ಉಜಿರೆ ಶ್ರೀ ಜನಾರ್ದನ ಕ್ಷೇತ್ರಕ್ಕೆ ಬ್ರಹ್ಮಕಲಶೋತ್ಸವದ ಸಂಭ್ರಮದ ಸುದಿನದಂದು ಉಜಿರೆಗೆ ಆಗಮಿಸುವ ಸಂದರ್ಭದಲ್ಲಿ ಧರ್ಮಯಾತ್ರೆ ಉಜಿರೆಯ ಭಕ್ತರ ಪಾಲಿಗೆ ಅಧ್ಯಾತ್ಮ ಯಾತ್ರೆ ಅವಿಸ್ಮರಣೀಯ ಮಧುರ ಕ್ಷಣವಾಗಲಿದೆ. ಧರ್ಮಸ್ಥಳಕ್ಕೂ ಉಜಿರೆಗೂ ಇರುವ ಅವಿನಾಭಾವ ಸಂಬಂಧವನ್ನು ಬೆಸೆಯುವ ಮತ್ತೊಂದು ಮಹಾಪರ್ವವಾಗಲಿದೆ. ನೂತನ ರಥದಲ್ಲಿ ಉಭಯ ದೇವರ ಬ್ರಹ್ಮರಥೋತ್ಸವವನ್ನು ಸಹಸ್ರ ಸಹಸ್ರ ಭಕ್ತಾದಿಗಳು ಕಣ್ತುಂಬಿಕೊಳ್ಳುವ ಅಪೂರ್ವ ಕ್ಷಣಕ್ಕಾಗಿ ಕಾತುರರಾಗಿದ್ದಾರೆ. ಮಾ 11 ರಂದು ಅಪರಾಹ್ನ ೪ರಿಂದ ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಶ್ರೀ ಜನಾರ್ದನ ದೇವಸ್ಥಾನದ ವರೆಗೆ ನಡೆಯಲಿರುವ ಧರ್ಮಯಾನ ಶೋಭಾಯಾತ್ರೆಯಲ್ಲಿ ಸರ್ವಾಲಂಕೃತ ಮೂರು ರಥಗಳಲ್ಲಿ ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆಯವರು, ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳವರು , ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ಹಾಗು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುವುದು. ಧರ್ಮಯಾನ ಶೋಭಾಯಾತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ಶ್ರೇಷ್ಠ ಕಲಾವಿದರನ್ನೊಳಗೊಂಡ, 25 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಳ್ಳುವಿಕೆ ನಿರೀಕ್ಷೆಯಿದೆ.

ಗ್ರಾಮಾಭಿವೃದ್ಧಿಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಮತ್ತು ಶಶಿಧರ್ ಶೆಟ್ಟಿ ನವಶಕ್ತಿ ಹಾಗು ಎಸ್ ಡಿ ಎಂ ಶಿ ಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್. ಅವರ ಸಹಕಾರದೊಂದಿಗೆ ನಡೆಯಲಿದ್ದು ಸಮಸ್ತ ಭಕ್ತಾದಿಗಳು ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಹೆದ್ದಾರಿ ಬದಿಯಲ್ಲೇ ಬೆಳ್ತಂಗಡಿ ವಾರದ ಸಂತೆ: ಹೆಚ್ಚಿದ ಟ್ರಾಫಿಕ್ ಜಾಮ್-ಪ್ರತಿ ದಿನ ಸಂಕಷ್ಟಕ್ಕೆ ಸಿಲುಕಿದ ವಾಹನ ಚಾಲಕರು, ಪ್ರಯಾಣಿಕರ ಗೋಳು

Suddi Udaya

ಭಾರೀ ಮಳೆ ಹಿನ್ನೆಲೆ: ಬೆಳ್ತಂಗಡಿ ತಾಲೂಕಿಗೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಭೇಟಿ

Suddi Udaya

ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೇವಲ 3 ತಿಂಗಳಲ್ಲಿಗ್ಯಾರಂಟಿಗಳನ್ನು, ಅನುಷ್ಠಾನಗೊಳಿಸಿದೆ:ಎಂಎಲ್ಸಿ ಹರೀಶ್ ಕುಮಾರ್

Suddi Udaya

ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ರವರು ಕಲಾನಿಧಿ ಪ್ರಶಸ್ತಿಗೆ ಆಯ್ಕೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ

Suddi Udaya

ಕಿಲ್ಲೂರು ಮಾರಿಗುಡಿ ಯುವ ಕೇಸರಿ ಗೆಳೆಯರ ಬಳಗ ಆಶ್ರಯದಲ್ಲಿ ಹೊನಲು ಬೆಳಕಿನ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಬಾಲಕಿಯರ ಮ್ಯಾಟ್‌ ಕಬಡ್ಡಿ ಪಂದ್ಯಾಟ

Suddi Udaya
error: Content is protected !!