ನಾವೂರು ಬಡೆಕ್ಕಾವು ಗುತ್ತು ಗ್ರಾಮದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮುಹೂರ್ತ
ಮಾ.14 ರ ಮೀನಾ ಸಂಕ್ರಮಣದಂದು ಅರ್ಚಕ ಅನಂತರಾಮ ಉಪಾಧ್ಯಾಯ ಪೌರೋಹಿತ್ಯದಲ್ಲಿ ನೆರವೇರಿ ತುಳುನಾಡಿನ ದೈವದ ಕಂಬಳಕ್ಕೆ ಮತ್ತು ತುಳುವರ ಧಾರ್ಮಿಕ ನಂಬಿಕೆಗೆ ಅವಿನಾಭಾವ ಸಂಬಂಧವಿದೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕಂಬಳ ಮಹತ್ವವನ್ನು ಪಡೆದುಕೊಂಡಿದ್ದು ಈ ಕಾಲಘಟ್ಟದಲ್ಲಿ ದೈವ ಸೇವೆ ಎಂದು ಕಂಬಳ ನಡೆಯುತ್ತಿರುವುದು ಬಹಳ ಅಪರೂಪ
ಇಲ್ಲಿಯ ಸಂಸ್ಕೃತಿ ಮತ್ತು ದೈವರಾದನೆ ಹಾಗೂ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಜಾನಪದ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಂಬಳ ಮುಹೂರ್ತವನ್ನು ಸಾಂಕೇತಿಕವಾಗಿ ನಡಗುತ್ತು ಧನಂಜಯ ಅಜ್ರಿ ನೆರವೇರಿಸಿದರು.
ಪ್ರಮುಖರಾದ ವಿಜಯ ಕುಮಾರ್ ಕಂಗಿನ ಮನೆ, ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ರಕ್ಷಿತ್ ಅಜಿಲ ಬಡೆಕ್ಕಾವು, ಸತೀಶ್ ದಂಪತಿಗಳು ಬೊಳ್ಳೂರುಗುತ್ತು, ಜಿನೇಂದ್ರ ಕುಮಾರ್ ಈದು, ಶಾಂತಪ್ರಸಾದ್ ಬಂಟ್ವಾಳ, ವಸಂತ ಪೂಜಾರಿ ಇಡ್ಯಾಲ, ಜಾರಪ್ಪ ಮೂಲ್ಯ ಕಾರ್ಮಿನಡ್ಕ, ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ, ಊರಿನ ಎಲ್ಲಾ ಭಕ್ತರು ಚಾಕರಿಯವರು ಗುತ್ತು ಬರ್ಕೆಯವರು, ದೈವದ ಪರಿಚಾರಕರು ವಿನಯದವರು ಪರ ಊರಿನವರು ಉಪಸ್ಥಿತರಿದ್ದರು. ವರದಿ: ರತ್ನಾಕರ ನಾವೂರು












