29.5 C
ಪುತ್ತೂರು, ಬೆಳ್ತಂಗಡಿ
June 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಕ್ಷಭಾರತಿಯಿಂದ ಯಕ್ಷಗಾನ “ಕರಂಡಕಾಸುರ ವಧೆ”

ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆ “ಕೃಷ್ಣಾನುಗ್ರಹ ಕಲ್ಯಾಣ ಮಂಟಪ”ದಲ್ಲಿ ಯಕ್ಷಭಾರತಿಯ 11ನೇ ವಾರ್ಷಿಕ ಸಮಾರಂಭದ ನಿಮಿತ್ತ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರಸಂಗ “ಕರಂಡಕಾಸುರ ವಧೆ ” ಮಾ.7ರಂದು ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಶ್ರೇಯಸ್ ಪಾಳಂದೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಕೃಷ್ಣನಾಗಿ ಪ್ರಶಾಂತ ಮುಂಡ್ಕೂರು, ಅರ್ಜುನನಾಗಿ ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಜಗಳಗ್ರಂಥಿಯಾಗಿ ಶಶಿಕಿರಣ ಕಾವು, ಕಲುಷಗಾಮಿನಿಯಾಗಿ ಸುರೇಶ ಬಾಯಾರು, ಶುಕತುಂಡನಾಗಿ ಪ್ರಶಾಂತ್ ಪುತ್ತೂರು, ಹನುಮಂತನಾಗಿ ಚಂದ್ರಶೇಖರ ಧರ್ಮಸ್ಥಳ, ಕರಂಡಕಾಸುರನಾಗಿ ಶೀಶ ಮಣಿಲ ಪಾತ್ರ ನಿರ್ವಹಿಸಿದರು.

ಶ್ರೀಮಾತಾ ಆರ್ಟ್ಸ್ ನ ಗುರುಪ್ರಸಾದ್ ವೇಷ ಭೂಷಣದಲ್ಲಿ ಸಹಕರಿಸಿದರು. ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಸಮಿತಿಯ ವತಿಯಿಂದ ನೀಡುವ ಗೌರವವನ್ನು ಯಕ್ಷಭಾರತಿಯ ಸಂಚಾಲಕ ಮಹೇಶ ಕನ್ಯಾಡಿ ಸ್ವೀಕರಿಸಿದರು.

Related posts

ಡಾ. ಸುಬ್ರಹ್ಮಣ್ಯ ಭಟ್ಟರ ಐತಿಹಾಸಿಕ ಕಾದಂಬರಿ “ಪ್ರತಿಷ್ಠೆ” ಅಳದಂಗಡಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರವರಿಂದ ಬಿಡುಗಡೆ

Suddi Udaya

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya

ಉಜಿರೆಯಲ್ಲಿ “ಖಿಯಾದ” ಎಸ್.ಎಸ್. ಎಫ್ ರಾಜ್ಯ ಪ್ರತಿನಿಧಿ ಸಮಾವೇಶ

Suddi Udaya

ಉಜಿರೆ ಗೌಸಿಯ ಯಂಗ್ ಮೆನ್ಸ್ ನ ನೂತನ ಅಧ್ಯಕ್ಷರಾಗಿ ಸಯ್ಯದ್ ಝೈನುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಇಕ್ಬಾಲ್ ಉಜಿರೆ ಆಯ್ಕೆ

Suddi Udaya

ವಸಂತಿ ಟಿ. ನಿಡ್ಲೆ ರವರು ಆಲ್ ಇಂಡಿಯಾ ವಿಮೆನ್ ಅಚೀವರ್-2023 ಪ್ರಶಸ್ತಿಗೆ ಆಯ್ಕೆ

Suddi Udaya

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya
error: Content is protected !!