August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಕ್ಷಭಾರತಿಯಿಂದ ಯಕ್ಷಗಾನ “ಕರಂಡಕಾಸುರ ವಧೆ”

ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆ “ಕೃಷ್ಣಾನುಗ್ರಹ ಕಲ್ಯಾಣ ಮಂಟಪ”ದಲ್ಲಿ ಯಕ್ಷಭಾರತಿಯ 11ನೇ ವಾರ್ಷಿಕ ಸಮಾರಂಭದ ನಿಮಿತ್ತ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರಸಂಗ “ಕರಂಡಕಾಸುರ ವಧೆ ” ಮಾ.7ರಂದು ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಶ್ರೇಯಸ್ ಪಾಳಂದೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಕೃಷ್ಣನಾಗಿ ಪ್ರಶಾಂತ ಮುಂಡ್ಕೂರು, ಅರ್ಜುನನಾಗಿ ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಜಗಳಗ್ರಂಥಿಯಾಗಿ ಶಶಿಕಿರಣ ಕಾವು, ಕಲುಷಗಾಮಿನಿಯಾಗಿ ಸುರೇಶ ಬಾಯಾರು, ಶುಕತುಂಡನಾಗಿ ಪ್ರಶಾಂತ್ ಪುತ್ತೂರು, ಹನುಮಂತನಾಗಿ ಚಂದ್ರಶೇಖರ ಧರ್ಮಸ್ಥಳ, ಕರಂಡಕಾಸುರನಾಗಿ ಶೀಶ ಮಣಿಲ ಪಾತ್ರ ನಿರ್ವಹಿಸಿದರು.

ಶ್ರೀಮಾತಾ ಆರ್ಟ್ಸ್ ನ ಗುರುಪ್ರಸಾದ್ ವೇಷ ಭೂಷಣದಲ್ಲಿ ಸಹಕರಿಸಿದರು. ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಸಮಿತಿಯ ವತಿಯಿಂದ ನೀಡುವ ಗೌರವವನ್ನು ಯಕ್ಷಭಾರತಿಯ ಸಂಚಾಲಕ ಮಹೇಶ ಕನ್ಯಾಡಿ ಸ್ವೀಕರಿಸಿದರು.

Related posts

ಅರಸಿನಮಕ್ಕಿ: ಪಡ್ಡಾಯಿಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ತಿರುಮಲೇಶ್ವರ ಭಟ್ ಹೃದಯಾಘಾತದಿಂದ ನಿಧನ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಮುಹಮ್ಮದ್ ಹಫೀಝ್ 100ನೇ ದಿನದ ಸ್ಮರಣಾರ್ಥ ಎಸ್.ಬಿ.ಎಸ್ ಕುಂಟಿನಿ ಮದರಸ ವತಿಯಿಂದ ರಕ್ತದಾನ ಶಿಬಿರ

Suddi Udaya

ಸತ್ಯ ಶೋಧಕ ವೇದಿಕೆ ಮಹಾಸಭೆ: ನೂತನ ಕಚೇರಿ ಉದ್ಘಾಟನೆ

Suddi Udaya

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರವರಿಗೆ ‘ಆಯುಷ್ ರತ್ನ ಪ್ರಶಸ್ತಿ’ ಪುರಸ್ಕಾರ

Suddi Udaya

ಬೆಳ್ತಂಗಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಶಾಸಕರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!