ಬೆಳ್ತಂಗಡಿ: ತಾಲೂಕಿನಾದ್ಯಂತ ಬೆಳಗ್ಗಿನಿಂದ ಎಡೆಬಿಡದೆ ಸತತವಾಗಿ ಭಾರೀ ಮಳೆಯಾಗುತಿದ್ದು ತಾಲೂಕಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಳಿಯ ಗ್ರಾಮ ಪಂಚಾಯತ್ ಮನೆ,ಮನೆಗೆ ಕುಡಿಯುವ ನೀರಿನ ಸರಬರಾಜು ಮಾಡಲು ನದಿಯಲ್ಲಿ ನಿರ್ಮಾಣ ಮಾಡಿ ನೀರಿನ ಟ್ಯಾಂಕ್ ಸಂಪೂರ್ಣ ಮುಳುಗಡೆ ಆಗಿತ್ತು.

ಕಳಿಯ ಗ್ರಾಮದ ಎರುಕಡಪ್ಪು ಸೋಮಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತಿದ್ದು, ನದಿಯ ಪಕ್ಕದಲ್ಲಿರುವ ಕಲ್ಕುರ್ಣಿ ದಯಾನಂದ, ಬೆಲ್ಡೆ ಮಾಧವ ಗೌಡ ಹಾಗೂ ಎರುಕಡಪ್ಪು ಯಾಕುಬ್ ಅವರ ಅಡಿಕೆ,ತೆಂಗಿನ ತೋಟಗಳು ಮುಳುಗಡೆಯಾಗಿದೆ. 1974 ಈ ರೀತಿಯಲ್ಲಿ ಮಳೆ ಬಂದಿದೆ ಎಂದು ಸ್ಥಳೀಯ ಹಿರಿಯರು ಹೇಳುತ್ತಿದ್ದಾರೆ.














