ಶಿರಸಿ: ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಯಿತು.
ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಅಂಕೋಲಾದ ದಿಗಂಬರ್ ನಾಯ್ಕ್, ಸಿದ್ದಾಪುರದ ಕುಸುಮಾಕರ್ ನಾಯ್ಕ್, ಯಲ್ಲಾಪುರದ ಮಧುಕೇಶ್ವರ ನಾಯ್ಕ್ ರವರಿಗೆ ಯಲಹಂಕ ಸಮೃದ್ಧಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ನಾರಾಯಣ ರಾಮಕೃಷ್ಣ ಕೋಮಾರ್, ಶಿರಸಿ ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಹಾಗೂ ಶಿರಸಿ ಸ್ಕ್ಯಾನ್ ಡೈಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ನ ಡೈರೆಕ್ಟರ್ ಡಾ. ದಿನೇಶ್ ಹೆಗ್ಡೆ, ಶಿವಂ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕರು ಡಾ. ಮಧುಕೇಶ್ವರ ಹೆಗ್ಡೆಯವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿ ಶುಭಹಾರೈಸಿದರು.












