September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ವತಿಯಿಂದ ಪಂಚಾಯತ್‌ಗೆ ಡಸ್ಟ್‌ಬಿನ್ ವಿತರಣೆ

ನೆಲ್ಯಾಡಿ: ನೆಲ್ಯಾಡಿಯ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ (ಎಸ್‌ಎಂವೈಎಂ) ಉತ್ಸಾಹಿ ಯುವಕರ ಬಳಗವು ನೆಲ್ಯಾಡಿ ಪೇಟೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿ, ನಂತರ ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ಐದು ಡಸ್ಟ್‌ಬಿನ್‌ಗಳನ್ನು ಹಸ್ತಾಂತರಿಸಲಾಯಿತು.

ಪಂಚಾಯತ್ ಆಡಳಿತ ಅಧಿಕಾರಿ ಜಯರಾಜ್ ಹಾಗೂ ಕಾರ್ಯದರ್ಶಿ ಭಾರತಿ ಅವರ ಸಮ್ಮುಖದಲ್ಲಿ ಪಂಚಾಯತ್ ಸಿಬ್ಬಂದಿ ಡಸ್ಟ್‌ಬಿನ್‌ಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಡಸ್ಟ್‌ಬಿನ್‌ಗಳನ್ನು ಸ್ವೀಕರಿಸುವ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಪಂಚಾಯತ್‌ಗೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ವಚ್ಛತಾ ಕಾರ್ಯಕ್ಕೆ ಸಂಘ ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಪಂಚಾಯತ್ ಮುಖಾಂತರ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ “ಸ್ವಚ್ಛ ಭಾರತ” ಪರಿಕಲ್ಪನೆಯನ್ನು ಜೀವಂತವಾಗಿಡಬೇಕು ಎಂದು ಸೆಂಟ್ ಅಲ್ಫೋನ್ಸ ಚರ್ಚ್ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಹೇಳಿದರು.

ಈ ಕಾರ್ಯಕ್ರಮಕ್ಕೆ ಯುವ ಮುಂದಾಳುಗಳಾದ ತೋಮಸ್, ಅಬಿನ್, ಡಿನು, ನವೀನ್, ದಿಶಾ, ಸನೂಷ, ಅರ್ಚನಾ, ಅಲೀನಾ ಥೋಮಸ್, ಶಾನ್, ಜೈಸನ್ ಮತ್ತು ಜೋಯಲ್ ಅವರು ಸಾರಥ್ಯ ವಹಿಸಿದರು.

ಕಾರ್ಯಕ್ರಮಕ್ಕೆ ಸಿರಿಯನ್ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ನೆಲ್ಯಾಡಿ, ಜಿನೋಯ್ (ರಿಯಾ ರಬ್ಬರ್ಸ್), ಸೀಗಲ್ ಟ್ರೇಡರ್ಸ್, ಈಪನ್ ವರ್ಗೀಸ್, ಓ.ಜಿ. ನೈನಾನ್, ಜೆನಿ (ರಾಜಸ್ಥಾನ್ ಮಾರ್ಬಲ್ಸ್), ಸೆಂಟ್ ಅಲ್ಫೋನ್ಸ ಕ್ರೆಡಿಟ್ ಯೂನಿಯನ್, ಜೇಮ್ಸ್ (ಜೀಸಸ್ ಟಯರ್ಸ್), ಸಿ.ಸಿ.ಎಂ.ಎಲ್ ಸೆಂಟ್ ಅಲ್ಫೋನ್ಸ ಚರ್ಚ್, ಜೋಸೆಫ್ ಎಂಬ್ರಾಂಡಿವಯಲಿಲ್, ಪೌಲ್ ಡಿಸೋಜ ಹಾಗೂ ಲೇಸರ್ ಕಾರ್ ವಾಶ್ ಇವರು ಆರ್ಥಿಕ ಸಹಾಯ ನೀಡಿ ಸಹಕರಿಸಿದರು. ಚರ್ಚ್ ನ ಪಾಲನ ಸಮಿತಿ ಯ ರಾಜೇಶ್, ಜೋನ್ಸನ್, ಜೋಯ್, ರೆಜಿ ಸುಜಾ ಜೇಮ್ಸ್, ಸಣ್ಣಿ, ಶಿಬು ಮೊದಲಾದವರು ಭಾಗವಹಿಸಿದರು.

Related posts

ಭಾರತೀಯ ಮಾಜ್ದೂರು ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ

Suddi Udaya

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

Suddi Udaya

ಪತ್ರಕರ್ತ, ಭುವನೇಶ್ ಗೇರುಕಟ್ಟೆ ರವರಿಗೆ ಮಾತೃವಿಯೋಗ

Suddi Udaya

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ಈ “ದಸ್ಕತ್”ಡಿಸೆಂಬರ್ 13 ರಂದು ಬಿಡುಗಡೆ,

Suddi Udaya

ಕಿಲ್ಲೂರು : ಹರ್ಷ ಮಟನ್, ಚಿಕನ್, ಹಾಗೂ ಫಿಶ್ ಸೆಂಟರ್ ಶುಭಾರಂಭ

Suddi Udaya

ಚಾರ್ಮಾಡಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃ ಮಂಡಳಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!