ಗುರುವಾಯನಕೆರೆ: ಗೆಳೆಯರ ಬಳಗ ಗುರುವಾಯನಕೆರೆ ಇದರ ವತಿಯಿಂದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಅ.17ರಿಂದ ಅ.20ರವರೆಗೆ ನಡೆಯಲಿರುವ 39ನೇ ವಷ೯ದ ಸಾವ೯ಜನಿಕ ಶ್ರೀ ಶಾರದಾ ಪೂಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ.೧೮ರಂದು ಶಾರದಾ ಮಂಟಪದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುದ್ದಿ ಉದಯ ವಾರಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಮನೋಹರ್ ಹಾಗೂ ಗೆಳೆಯರ ಬಳಗ ಅಧ್ಯಕ್ಷ ತಿಲಕ್ ರಾಜ್ ಕೋಡಿಬೈಲ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಕಾರ್ಯದರ್ಶಿ ಮಂಜುನಾಥ ಕುಂಬ್ಳೆ, ಭಜನಾ ಮಂಡಳಿಯ ಅಧ್ಯಕ್ಷೆ ಕುಸುಮಾವತಿ ಕಂಚಿಂಜೆ, ಗೆಳೆಯರ ಬಳಗದ ಗೌರವಾಧ್ಯಕ್ಷ ಕೃಷ್ಣಾನಂದ ಕುಲಾಲ್, ಉಪಾಧ್ಯಕ್ಷ ದಾಮೋದರ ಕೆ., ಜೊತೆ ಕಾರ್ಯದರ್ಶಿ ಕಾತಿ೯ಕ್ ನಾಯಕ್, ಪ್ರಮುಖರಾದ ಆನಂದ ಕೋಟ್ಯಾನ್, ಮೋಹನ್ ಕಂಚಿಂಚೆ, ವೇಣುಗೋಪಾಲ್ ಕಂಚಿಂಜೆ, ರತ್ನಾಕರ ಮಾಸ್ಟರ್, ಆಶಾಲತಾ, ಮತ್ತು ಗೆಳೆಯರ ಬಳಗ ಹಾಗೂ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು, ಬಳಗದ ಸದಸ್ಯರಾದ ಆನಂದ್ ಕೋಟ್ಯಾನ್ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











