September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ ಮನೋಹರ್ ಬಳಂಜ ಪುನರಾಯ್ಕೆ

ಬೆಳ್ತಂಗಡಿ: ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಬಳಂಜ ಶಿಕ್ಷಣ ಟ್ರಸ್ಟ್ ರಿ.ಬಳಂಜ ಇದರ ಅಧ್ಯಕ್ಷರಾಗಿ ಪತ್ರಕರ್ತ ಮನೋಹರ್ ಬಳಂಜ ಪುನರಾಯ್ಕೆಗೊಂಡಿದ್ದಾರೆ.

ಟ್ರಸ್ಟ್‌ನ ಸಭೆಯು ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಬಳಂಜ ಅವರ ಅಧ್ಯಕ್ಷತೆಯಲ್ಲಿ ಸ.ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢ ಶಾಲೆ ಬಳಂಜದಲ್ಲಿ ನಡೆಯಿತು. ಟ್ರಸ್ಟ್‌ನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮನೋಹರ್ ಬಳಂಜ, ಉಪಾಧ್ಯಕ್ಷರಾಗಿ ವಿನು ಬಳಂಜ, ಕಾರ್ಯದರ್ಶಿಯಾಗಿ ರತ್ನರಾಜ ಜೈನ್ ಪೇರಂದಬೈಲು, ಕಾನೂನು ಸಲಹೆಗಾರರಾಗಿ ಸತೀಶ್ ರೈ ಬಾರ್ದಡ್ಕ, ಟ್ರಸ್ಟಿಗಳಾಗಿ ಪ್ರಮೋದ್ ಜೈನ್,ಸಂತೋಷ್ ಕುಮಾರ್ ಕಾಪಿನಡ್ಕ,ಪ್ರಶಾಂತ್ ಡಿ.ಬಳಂಜ, ರಾಕೇಶ್ ಹೆಗ್ಡೆ ಬಳಂಜ,ಚಂದ್ರಶೇಖರ ಪಿ.ಕೆ.,ಪ್ರವೀಣ್ ಕುಮಾರ್ ಹೆಚ್.ಎಸ್.,ಅನಂತರಾಮ್ ಹೊಳ್ಳ, ಸತೀಶ್ ಕೆ. ಮತ್ತು ಅಹ್ವಾನಿತ ಟ್ರಷ್ಟ್ ಗಳಾಗಿ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷರನ್ನು, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರನ್ನು, ಬಳಂಜ ಶಾಲಾ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ಟ್ರಸ್ಟಿಗಳಾಗಿ ಆಯ್ಕೆಮಾಡಲಾಯಿತು.

ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದಿಂದ, ಸತ್ಕಾರ್ಯ ಸ್ನೇಹಿತ ಬಳಗದ ನೆರವು ಹಾಗೂ ಬಳಂಜ‌ ಶಾಲಾ ಶಿಕ್ಷಣ ಪ್ರೇಮಿಗಳು ಹುಟ್ಟು ಹಬ್ಬ ಆಚರಣೆ, ಮನೆಯ ಶುಭಕಾರ್ಯ ಪ್ರಯುಕ್ತ ಶಿಕ್ಷಣ ನೆರವು ನೀಡುತ್ತಿರುವ ಕಾರಣ ಅನೇಕ ಅಭಿವೃದ್ದಿ ಕಾರ್ಯಕ್ರಮ ಮಾಡಲು ಸಹಕಾರಿಯಾಗಿದ್ದು ಈ ಬಗ್ಗೆ ಚರ್ಚಿಸಲಾಯಿತು.

ಶಾಲೆಗೆ ರೋಟರಿ ಕ್ಲಬ್ ವತಿಯಿಂದ ರೂ 14 ಲಕ್ಷ ವೆಚ್ಚದ ಸೋಲಾರ್ ಅಳವಡಿಕೆ,ರಂಗ ಮಂದಿರ ಅಭಿವೃದ್ಧಿ ಇನ್ನಿತರ ಕೆಲಸಗಳು, ಶಾಲೆಗೆ 250 ಚೇಯರ್ ಹಸ್ತಾಂತರ, 2 ವರ್ಷದಲ್ಲಿ 4 ಗೌರವ ಶಿಕ್ಷಕಿಯರ ನೇಮಕಾತಿ ಮಾಡಿ ವೇತನ ನೀಡಿರುವುದು, ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ಮಕ್ಕಳ ತಂಗುದಾಣ ನಿರ್ಮಾಣ, ಪ್ರಾಥಮಿಕ ಹಂತದ ತಾಲೂಕು ಮಟ್ಟದ ಕ್ರೀಡೋತ್ಸವ, ಸುಮಾರು 50 ಮಕ್ಕಳಿಗೆ ಉಚಿತ ಎಲ್.ಕೆ.ಜಿ, ಯು.ಕೆ.ಜಿ. ಶಿಕ್ಷಣ, ಧ.ಗ್ರಾ ಯೋಜನೆ ನೆರವಿನಿಂದ ರೂ 6 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ಅಗಲೀಕರಣ, 5 ಲಕ್ಷ ರೂ. ವೆಚ್ಚದಲ್ಲಿ ವಿಧಾನಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ರವರ ಅನುದಾನದಲ್ಲಿ ಕೊಠಡಿ ನವೀಕರಣ, ರೂ 3 ಲಕ್ಷ ವೆಚ್ಚದಲ್ಲಿ ತಾ.ಪಂ. ಅನುದಾನದೊಂದಿಗೆ ಕೊಠಡಿ ನವೀಕರಣ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಉಜಿರೆ ಇವರ ಸಹಕಾರದೊಂದಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ರೂ1.20 ಲಕ್ಷ ವೆಚ್ಚದಲ್ಲಿ ಶೀಟ್ ಅಳವಡಿಕೆ, ತರಬೇತಿ ಕಾರ್ಯಾಗಾರ, ಇನ್ನಿತರ ಅನೇಕ ‌ ಶೈಕ್ಷಣಿಕ ‌ ಚಟುವಟಿಕೆ ಮಾಡಿದ ಬಗ್ಗೆ ಸಭೆಯಲ್ಲಿ ಸಂತಸ ವ್ಯಕ್ತಪಡಿಸಲಾಯಿತು. ಇದಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಮುಂದಿನ ದಿನಗಳಲ್ಲಿ ಮಂಗಳೂರು ಮೆಸ್ಕಾಂ ವಿಭಾಗದ ಅಧ್ಯಕ್ಷರಾದ ಕೆ.ಹರೀಶ್‌ ಕುಮಾರ್ ರವರ ಸಹಕಾರದೊಂದಿಗೆ 15 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ನಿರ್ಮಾಣ, ಶಾಸಕ ಹರೀಶ್ ಪೂಂಜ ರವರ ಅನುದಾನದೊಂದಿಗೆ ರಂಗ ಮಂದಿರ ನಿರ್ಮಾಣ, ಉದ್ಯಮಿ ಶೇಖರ ದೇವಾಡಿಗ ಸಹಕಾರದೊಂದಿಗೆ ಚಿಣ್ಣರ ಅಂಗಣ ನಿರ್ಮಾಣ, ಮಕ್ಕಳಿಗೆ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ, ಮುಂದೆಯೂ ಉಚಿತ ಅಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಕಂಪ್ಯೂಟ‌ರ್ ‌ ಶಿಕ್ಷಣ, ತರಗತಿ ಕೊಠಡಿಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಕೆ, ಶಾಲೆಗೆ ಅಗತ್ಯವಾದ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು.

ಉಪಾಧ್ಯಕ್ಷ ವಿನು ಬಳಂಜ ವಂದಿಸಿದರು.

Related posts

ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟದ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿದ್ಯೇಂದ್ರತೀರ್ಥ ಶ್ರೀಪಾದರ ಭೇಟಿ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಜು.6 : ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಚ್ಚ ಭಾರತ ಅಭಿಯಾನದ ಕುರಿತು ವಿಶೇಷ ಉಪನ್ಯಾಸ

Suddi Udaya

ವಿದ್ಯಾಶ್ರೀ ಅಡೂರ್ ಅವರ 3 ನೇ ಕವನಸಂಕಲನ “ಪಯಣ” ಕವನಗಳ ಹಾದಿಯಲ್ಲಿ ಬಿಡುಗಡೆ

Suddi Udaya
error: Content is protected !!