ಬೆಳ್ತಂಗಡಿ: ದ ಕ ಜಿಲ್ಲಾ ಗೊಲ್ಲ (ಯಾದವ )ಸಂಘ ಬೆಳ್ತಂಗಡಿ ವಲಯದ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ (582)ತೇರ್ಗಡೆಗೊಂಡ ಮನಿಷಾ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರು ಶರ್ಮಿಳಾ ಮತ್ತು ನಿರಂಜನ ರಾವ್ ದಂಪತಿ ಪುತ್ರಿ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರತ್ನಾಕರ ರಾವ್, ಕಾರ್ಯದರ್ಶಿ ರಾಜೇಶ್ ಕೆ., ಅರ್ಚಕರಾದ ಹರೀಶ್ ಗೊಲ್ಲ ಹಾಗೂ ಪ್ರಕಾಶ್ ರಾವ್ ಉದಯ ಕುಮಾರಿ ಉಪಸ್ಥಿತರಿದ್ದರು.













