August 10, 2026
Uncategorized

ಕುವೆಟ್ಟು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಹಾಭಾಗೀತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಕುವೆಟ್ಟು ಗ್ರಾಮ ಪಂಚಾಯತ್ ಅರಿವು ಕೇಂದ್ರ ಕುವೆಟ್ಟು ಇದರ ಸಹಾಭಾಗೀತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಮೇ 04 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ಶಿಬಿರಕ್ಕೆ ಚಾಲನೆ ನೀಡಿದರು ಐದು ದಿವಸಗಳಿಂದ ಮಕ್ಕಳಿಗೆ ಶಿಬಿರದಲ್ಲಿ ವಿವಿಧ ಚಟುವಟಿಕೆ ಗಳನ್ನು ನಡೆಸಲಾಯಿತು ಸುಗಮಗಾ ರರಾಗಿ ಆನಂದ ಕೋಟ್ಯಾನ್ ಯೋಗಾಸನ ದ ವಿವಿಧ ಪ್ರಕಾರಗಳು. ಭುವನ್ ಮಕ್ಕಳಿಗೆ ಮನೋರಂಜನೆ ಯನ್ನು, ಸುಲೋಚನಾ ಇವರು ವಿವಿಧ ರೀತಿಯ ಆಟೋಟ ಗಳನ್ನು, ಕುಮಾರಿ ಭುವನೇಶ್ವರಿ ಮಕ್ಕಳಿಗೆ ಕ್ರ್ಯಾಪ್ಟ್ ನ ವಿವಿಧ ಚಟುವಟಿಕೆಗಳನ್ನು, ಜಾಲಜಾಕ್ಷಿ ಇವರು ಮಕ್ಕಳಿಗೆ ಆರೋಗ್ಯ ಮಾಹಿತಿ ಯನ್ನು ನೀಡಿರುತ್ತಾರೆ.

ಶಿಬಿರದಲ್ಲಿ ಹಾಡು ಕುಣಿತ ಗೇಮ್ಸ್, ಓದುವುದು, ಕ್ವಿಜ್ ಸ್ಮರಣೆ ಶಕ್ತಿ ಇವುಗಳನ್ನು ಕೂಡ ಮಕ್ಕಳಿಗೆ ನಡೆಸಲಾಯಿತು. ಸಮಾರೋಪ ಸಮಾರಂಭ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಇಮ್ತಿಯಾಜ್ , ಕಾರ್ಯದರ್ಶಿ ಶ್ರೀಮತಿ ಸೇವಂತಿ ಪಂಚಾಯತ್ ಸಿಬ್ಬಂದಿ ಆನಂದ್ ಕೋಟ್ಯಾನ್ ಇವರು ಭಾಗವಹಿಸಿ ಮಕ್ಕಳಿಗೆ ಹಿತವಚನ ನೀಡಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ಪುಸ್ತಕ ಮತ್ತು ಪೆನ್ ವಿತರಣೆ ಮಾಡಿದರು. ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಯಶೋಧ ಶ್ರೀಮತಿ ಸೌಮ್ಯ ದಿಲೀಪ್ ಕುಲಾಲ್ ಸುಲೋಚನಾ ಇವರು ಕಾರ್ಯಕ್ರಮದಲ್ಲಿ ಸಹಕರಿಸಿ ಗ್ರಂಥಾಲಯ ಮೇಲ್ವಿಚಾರಕರು ಶ್ರೀಮತಿ ವಸಂತಿ ಕಾರ್ಯಕ್ರಮ ನಡೆಸಿಕೊಟ್ಟರು.

Related posts

ಪಟ್ರಮೆ: ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪಗೌಡ) ನಿಧನ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಮಂಗಳೂರು ವಿ.ವಿ. ಮಟ್ಟದ ತ್ರೋಬಾಲ್ ಕ್ರೀಡಾಕೂಟ

Suddi Udaya

ಗುರುವಾಯನಕೆರೆ ನವಶಕ್ತಿಕ್ರೀಡಾಂಗಣದಲ್ಲಿ ಆದ್ದೂರಿಯಾಗಿ ನಡೆದ ಐತಿಹಾಸಿಕ ನಾಟಕ “ಛತ್ರಪತಿ ಶಿವಾಜಿ”

Suddi Udaya

ಬೈಕ್ ಕಳ್ಳತನ ಆರೋಪಿಯ ಬಂಧನ

Suddi Udaya

ಕೊಯ್ಯೂರು ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಮಾಲಾಡಿಯಲ್ಲಿ ನಂದಿನಿ ಹಾಲಿನ ವಾಹನ ಪಲ್ಟಿ

Suddi Udaya
error: Content is protected !!