August 9, 2026
ಅಭಿನಂದನೆತಾಲೂಕು ಸುದ್ದಿವರದಿ

ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದ ಶಾಸಕ ಹರೀಶ್ ಪೂಂಜರಿಗೆ: ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಗೌರವಾರ್ಪಣೆ

ಬಳಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರೂ , ಬೆಳ್ತಂಗಡಿ ಕ್ಷೇತ್ರದ ಜನಪ್ರೀಯ ಶಾಸಕರಾಗಿರುವ ಹರೀಶ್ ಪೂಂಜಾರವರು ಇತ್ತೀಚಿಗೆ ಕರ್ನಾಟಕ ಟಿವಿ ಜನಮತದ ಆಧಾರದಲ್ಲಿ ನಡೆಸಿದ ಕರಾವಳಿಯ ಶ್ರೇಷ್ಠ ಶಾಸಕ ಗೌರವವನ್ನು ಪಡೆದಿರುವ ಸಲುವಾಗಿ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಭಕ್ತರು, ಬಳಂಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಅಭಿಮಾನದ ಗೌರವಾರ್ಪಣೆಯನ್ನು ಶಾಸಕರ ಗೃಹ ಮಿಥಿಲದಲ್ಲಿ ಆ.9 ರಂದು ಸನ್ಮಾನಿಸಿ ಅಭಿನಂದಿಸಿದರು.


ಈ ಸಂಧರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೀತಲ್ ಪಡಿವಾಳ್ ಬಳೆಂಜ ಗುತ್ತು, ಚಂದ್ರಶೇಖರ್ ಪಿಕೆ , ಕುಳೆಂಜಿರೋಡಿ ಗುತ್ತು ಅರುಣ ಹೆಗ್ಗಡೆ, ಸತೀಶ್ ರೈ ಬಾರ್ದಡ್ಕ , ಸುರೇಶ ಶೆಟ್ಟಿ ಕುರೆಲ್ಯ, ದಿನೇಶ್ ಪಿಕೆ , ದೇಜಪ್ಪ ಪೂಜಾರಿ, ಪ್ರಭಾಕರ್ ಹೆಗ್ಡೆ ಕೊಡಿ , ಗುರುಪ್ರಸಾದ್ ಹೆಗ್ಡೆ, ಸುರೇಶ ಹೇವ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಬಳಂಜ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕ್ಷಣಗಳನ್ನು ನೆನಪಿಸಿ ದೇವಳದ ಮತ್ತು ಬಳಂಜ ಗ್ರಾಮದ ಸಮಸ್ತ ಅಭಿವೃದ್ಧಿಗೆ ಸದಾ ಜತೆಯಾಗಿರುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು. ಚಂದ್ರಶೇಖರ್ ಪಿಕೆ ಗ್ರಾಮಸ್ಥರ ಪರವಾಗಿ ಅಭಿನಂದನಾ ನುಡಿಗಳನ್ನಾಡಿದರು.

Related posts

ಅಳದಂಗಡಿ: ಕೆದ್ದುವಿನಲ್ಲಿ ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ, ಹಲವರಿಗೆ ಗಂಭೀರ ಗಾಯ

Suddi Udaya

ಫೆ.25: ಪಾಲೇದು ಶ್ರೀ ಮಹಮ್ಮಾಯಿ ಭೈರವ, ಸಹಪರಿವಾರ ಕ್ಷೇತ್ರದ ಶಿಲಾನ್ಯಾಸ ;ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉರುವಾಲು: ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ನಿಧನ

Suddi Udaya

ಆರಂಬೋಡಿ: ಗಂಟಲಿನ ಚಿಕ್ಕ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವ 2ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಸಮಾಜ ಸೇವಕ ಕೆ. ಮೋಹನ್ ಕುಮಾರ್ ಆಯ್ಕೆ

Suddi Udaya

ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!