ಬಾರ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಮುರುಗೋಳಿ ಬಾರ್ಯ ಇದರ ನೂತನವಾಗಿ ನಿರ್ಮಾಣವಾದ ಭಜನಾ ಮಂದಿರದ ರಚನೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದ ಸಮುದಾಯ ಅಭಿವೃದ್ಧಿ ಯೋಜನೆಯಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಯವರು ನೀಡಿದ ರೂ 1.50 ಲಕ್ಷದ ಡಿಡಿ ಯ ವಿತರಣೆಯನ್ನು ಯೋಜನೆಯ ನಿರ್ದೇಶಕ ಶೋಕ್ ಬಿ. ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿ ಹರೀಶ್ , ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಪ್ರಭಾಕರ ಗೌಡ ಪೊಸಂದೋಡಿ, ಭಜನ ಮಂಡಳಿಯ ಅಧ್ಯಕ್ಷ ಸೇಸಪ್ಪ ಸಾಲಿಯನ್ ಬಾರ್ಯ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಕೋಶಾಧಿಕಾರಿ ಮೋನಪ್ಪ ಗೌಡ ಮನಿಲ, ಸದಸ್ಯರಾದ ಪ್ರಶಾಂತ್ ಪೈ ಮುರುಗೋಳಿ, ಶಿವರಾಮ ಕೆಳಗಿನ ಅಂಗಡಿ, ಒಕ್ಕೂಟ ಅಧ್ಯಕ್ಷ ಪದ್ಮ ಗೌಡ, ಸುಕಲತಾ ತಣ್ಣೀರುಪಂಥ ವಲಯದ ಮೇಲ್ವಿಚಾರಕಿ ಹೇಮಾವತಿ ಸೇವಾ ಪ್ರತಿನಿಧಿ ಶಾಂತ ಸುನಿತಾ ಉಪಸಿತರಿದ್ದರು.













