ಬೆಳ್ತಂಗಡಿ: ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ನಿವಾಸಿ ಸರಸ್ವತಿ (52) ಎಂಬ ಮಹಿಳೆ ಚಿಕಿತ್ಸೆಗಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಪರೀಕ್ಷಿಸಿ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ.ವೆಂಕಟಸ್ವಾಮಿ ಯವರ ಮಾರ್ಗದರ್ಶನದಲ್ಲಿ ಖ್ಯಾತ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ.ರಶ್ಮಿ ಹಾಗೂ ಖ್ಯಾತ
ಶಸ್ತ್ರಚಿಕಿತ್ಸಕರಾದ ಡಾ.ರಾಘವೇಂದ್ರ ಹಾಗೂ ಶುಶ್ರೂಶಕಾಧಿಕಾರಿಗಳಾದ ರತ್ನ, ಪೂರ್ಣಿಮಾ ಇವರ ತಂಡದಿಂದ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯಲ್ಲಿ ನಡೆದ “Vaginal Hysterectomy”ಯೋನಿ ಗರ್ಭಕಂಠ”ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.













