September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಸಭೆ; ನೂತನ ಸಮಿತಿ ರಚನೆ

ಮೊಗ್ರು: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಮೊಗ್ರು, ಇದರ ಸಭೆಯು ಆ.20 ರಂದು ನಡೆಸಲಾಯಿತು.


ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಮೊಗ್ರು ಗ್ರಾಮದ ನೂತನ ಗೌಡರ ಯಾನೆ ಒಕ್ಕಲಿಗ ಸೇವ ಸಂಘ ಗ್ರಾಮ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮನೋಹರ ಗೌಡ ಅಂತರ ಮತ್ತು ಕಾರ್ಯದರ್ಶಿಯಾಗಿ ದೇಜಪ್ಪ ಗೌಡ ಅಂತರ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಹೊಸಮನೆ, ದಯಾನಂದ ಗೌಡ ಉಂತಣಾಜೆ, ಯಾದವ ಗೌಡ ಉಳಿಯ, ಪುರಂದರ ಗೌಡ ನೈಮಾರು, ಕೋಶಾಧಿಕಾರಿಯಾಗಿ ಶಶಿಧರ್ ಗೌಡ ಉಳಿಯ ಆಯ್ಕೆಯಾದರು. ಊರಿನಲ್ಲಿ ಕಾರ್ಯಕ್ರಮದ ಗೌಡಸ್ತಿಕೆ ಮಾಡುವ ಹಿರಿಯರನ್ನು ಸಮಿತಿಯ ಗೌರಧ್ಯಕ್ಷರನ್ನಾಗಿ ಮಾಡಲಾಯಿತು.

ಮುಗೇರಡ್ಕ ವಲಯ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಮುಗೇರಡ್ಕ, ಕಾರ್ಯದರ್ಶಿಯಾಗಿ ರಮೇಶ್ ಗೌಡ ನೆಕ್ಕರಾಜೆ, ಗೌರವಾಧ್ಯಕ್ಷರಾಗಿ, ಕೃಷ್ಣಪ್ಪ ಗೌಡ ನೈಮಾರು, ಜಿನ್ನಾಪ್ಪ ಗೌಡ ಗೌಡತಿಗೆ, ಮತ್ತು ಉಪಾಧ್ಯಕ್ಷರಾಗಿ ದೀಕ್ಷಿತ್ ಗೌಡ ನೈಮಾರು, ಪುರಂದರ ಗೌಡ ಎರ್ಮಲ, ಕೋಶಾಧಿಕಾರಿಯಾಗಿ ಜಗ್ಗದೀಶ್ ಗೌಡ ಅರ್ಬಿ ಆಯ್ಕೆ ಮಾಡಲಾಯಿತು.

ನೂತನ ಸಮಿತಿ ರಚನೆ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಧರ್ಮಸ್ಥಳ ಸೌಜನ್ಯ ಹತ್ಯೆ ಬಗ್ಗೆ ಖಂಡನೆ ವ್ಯಕ್ತಪಡಿಸಿ ಆ ಕೊಲೆಗೆ ಸಂಬಂಧಿಸಿದ ತನಿಖೆಯನ್ನು ಇನ್ನೊಮ್ಮೆ ಮಾಡಿಸಲು ಸರಕಾರಕ್ಕೆ ಒತ್ತಾಯ ಮಾಡುವ ಮನವಿ ಪತ್ರವನ್ನು ಆ.24 ರಂದು ಬಂದಾರು ಗ್ರಾಮಪಂಚಾಯತ್ ಮೊಗ್ರು ಗೌಡ ಸಂಘದ ವತಿಯಿಂದ ನೀಡುವುದು ಎಂದು ತೀರ್ಮಾನ ಮಾಡಲಾಯಿತು. ಮುಗೇರಡ್ಕ ದೈವಸ್ಥಾನದಲ್ಲಿ ನಿಜವಾದ ಆರೋಪಿಗಳಿಗೆ ದೈವಗಳು ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು

Related posts

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ಶ್ರೀಕಾಂತ್ ನನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ಮೇಲಂತಬೆಟ್ಟು ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya

ಮೂಡುಬಿದಿರೆ: ವೈಬ್ರೆಂಟ್ ವಿದ್ಯಾರ್ಥಿಗಳಿಗೆ ವಿಜೃಂಭಣೆಯ ಲಾಂಗ್ ಟರ್ಮ್ ಡೇ

Suddi Udaya

ಕೊಯ್ಯೂರು: ದೆoತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಳದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!