ನಾವೂರು: ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ನಿಂದ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ 15ರಂದು ನಡೆಯಿತು.

ಸಂಜೆ ದೈವ ದೇವರ ಪ್ರಸಾದ ರೂಪದಲ್ಲಿ ನಾವೂರು ಗ್ರಾಮದ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಬರಹ ಪುಸ್ತಕಗಳನ್ನು ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲಕ್ಷ್ಣಣ ಗೌಡ, ಪ್ರಮುಖರಾದ ಭುಜಬಲಿ ಧರ್ಮಸ್ಥಳ, ಜಾರಪ್ಪ, ಅರುಣ್, ವಿಜಯ್, ಪತ್ರಕರ್ತ ಮನೀಶ್ ವಿ. ಅಂಚನ್ ಪಾಲೇದು, ರವಿರಾಜ್ ಜೈನ್ ಬಡೆಕ್ಕಾವು ಗುತ್ತು, ವಸಂತ ಇಡ್ಯಲ, ರವಿ, ರಕ್ಷಿತ್ ಅಜಿಲ ಬಡೆಕ್ಕಾವು ಗುತ್ತು ಉಪಸ್ಥಿತರಿದ್ದರು.
ಇಂದಬೆಟ್ಟು ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು. ರತ್ನಾಕರ ಬಿ. ನಾವೂರು ಪ್ರಾಸ್ತಾವಿಕವಾಗಿ ಮಾತನಾಡಿ ಧನ್ಯವಾದವಿತ್ತರು.



ಬಳಿಕ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ನಡೆದು ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಸೇವೆ ನಡೆಯಿತು. ನೂರಾರು ಮಂದಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು. ಬಡೆಕ್ಕಾವು ಗುತ್ತು ಹಿರಿಯರು, ಚಾಕಿರಿ ವರ್ಗದವರು, ಊರಿನ ಮತ್ತು ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಉಪಸ್ಥಿತರಿದ್ದರು.













