29 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ

ಉಡುಪಿ: ಮಧುಮೇಹ ರೋಗಿಗಳಲ್ಲಿ ಪಾದದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಗಂಭೀರ ಪರಿಣಾಮಗಳು ಹಾಗೂ ಅಂಗಚ್ಛೇದನವನ್ನು ತಡೆಗಟ್ಟುವ ಉದ್ದೇಶದಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಇದರ ಶಲ್ಯತಂತ್ರ ವಿಭಾಗವು, PRIAS (Podiatry Reach Across India for Awareness and Screening) ಸಂಸ್ಥೆಯ ಸಹಯೋಗದಲ್ಲಿ, 2026ರ ಮೇ 20 ಮತ್ತು ಮೇ 23ರಂದು ಉಡುಪಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಮಧುಮೇಹದಿಂದಾಗಿ ಪಾದಗಳಲ್ಲಿ ಉಂಟಾಗುವ ನರಗಳ ಸಂವೇದನೆ ಕುಂಠಿತವಾಗುವುದು, ರಕ್ತಪ್ರವಾಹದ ಅಡಚಣೆ ಹಾಗೂ ಪಾದದ ಮೇಲಿನ ಅಸಾಮಾನ್ಯ ಒತ್ತಡದಿಂದ ಹುಣ್ಣುಗಳು ಉಂಟಾಗುವಂತಹ ಸಮಸ್ಯೆಗಳು ಅನೇಕ ಬಾರಿ ಗಂಭೀರ ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಸಮಯೋಚಿತ ತಪಾಸಣೆಯ ಮೂಲಕ ತಡೆಗಟ್ಟಬಹುದಾಗಿದೆ.

ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಆಧುನಿಕ ತಪಾಸಣಾ ಸಾಧನಗಳ ಮೂಲಕ ಕೆಳಕಂಡ ಪರೀಕ್ಷೆಗಳು ನಡೆಸಲಾಗುತ್ತದೆ:
ಪಾದದ ತಳಭಾಗದ ನರಗಳ ಸಂವೇದನೆ (Neuropathy) ತಪಾಸಣೆ, ಕಾಲುಗಳಿಗೆ ರಕ್ತಪ್ರವಾಹ ಸಮರ್ಪಕವಾಗಿದೆಯೇ ಎಂಬುದನ್ನು ತಿಳಿಯುವ ABI ಪರೀಕ್ಷೆ, ಪಾದದ ಮೇಲೆ ಅಸಾಮಾನ್ಯ ಒತ್ತಡದಿಂದಾಗಿ (Abnormal loading) ಕಾರ್ನ್ (Corn) ಅಥವಾ ಕಾಲೋಸಿಟಿ (Callosity) ಉಂಟಾಮಾಡುವ ಸಾಧ್ಯತೆ ಇರುವುದನ್ನು ಪತ್ತೆಹಚ್ಚುವುದು. ಪಾದದ ಹುಣ್ಣನ್ನು ತಡೆಗಟ್ಟುವುದು.

ಮಧುಮೇಹ ರೋಗಿಗಳಲ್ಲಿ ಪಾದದ ಹುಣ್ಣು ಮತ್ತು ಅಂಗಚ್ಛೇದನದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಶಿಬಿರ ಅತ್ಯಂತ ಉಪಯುಕ್ತವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತದಾದ್ಯಂತ ೬೭ ನಗರಗಳಲ್ಲಿ ಈ ವಿಶೇಷ ಶಿಬಿರ ನಡೆಯುತ್ತಿದೆ. ಸೂಕ್ತ ಮಧುಮೇಹ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಗತ್ಯವಿರುವ ರೋಗಿಗಳನ್ನು ಶಿಬಿರಕ್ಕೆ ಕಳುಹಿಸುವಂತೆ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Related posts

ಕೃಷಿ ಪಂಪುಗಳ ಸ್ಥಾವರಗಳಿಗೆ ಆಧಾರ್ ಜೋಡಣೆ ಹಿನ್ನಲೆ ಸರಕಾರಿ ರಜಾ ದಿನವಾದ ಆ.24,25 ರಂದು ಬೆಳ್ತಂಗಡಿ ಮೆಸ್ಕಾಂ ಕಛೇರಿ ಕಾರ್ಯನಿರ್ವಹಿಸಲಿದೆ

Suddi Udaya

ಕಣಿಯೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾಂಗ್ರೇಸ್ ಸೇರ್ಪಡೆ

Suddi Udaya

ಧರ್ಮಸ್ಥಳ : ಸಿಂದೂರ ಮಹಿಳಾ ವಿಭಾಗಕ್ಕೆ ಗಣ್ಯರಿಂದ ಮೆಚ್ಚುಗೆ

Suddi Udaya

ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹರೀಶ್ ಪೂಂಜರ ಪರ ಚುನಾವಣಾ ಪ್ರಚಾರಕ್ಕೆ ಮುಂಬೈ ಉದ್ಯಮಿ ಸುರೇಶ್ ಪೂಜಾರಿ

Suddi Udaya
error: Content is protected !!