ಬೆಳ್ತಂಗಡಿ: ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರ ಸಂಘ ಹಾಗೂ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಮೇ.೧೭ ರಂದು ಮಂಗಳೂರು ಎನ್.ಐ.ಟಿ.ಕೆ ಮೈದಾನದಲ್ಲಿ ನಡೆಯಿತು.

ಬೆಳ್ತಂಗಡಿ ಕಂದಾಯ ಇಲಾಖೆಯ ಮಹಿಳೆಯರ ಹಗ್ಗಜಗ್ಗಾಟ ಹಾಗೂ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ನಲ್ಲಿ ದ್ವೀತಿಯ ಸ್ಥಾನ ಪಡೆದಿದೆ. ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ನಲ್ಲಿ ಗೌತಮಿ ಹಾಗೂ ನಿವೇಧಿತಾ ಪ್ರಶಸ್ತಿ ಪಡೆದರೆ, ಹಗ್ಗಜಾಗ್ಗಟಾದಲ್ಲಿ ಆಶಾ, ಗೌತಮಿ, ಅನುಪಮ, ತೇಜಸ್ವಿನಿ, ಭಾರತಿ, ನಿವೇಧಿತಾ, ಸೌಜನ್ಯ, ಪ್ರಮೀಳಾ ಹಾಗೂ ರನಿತಾ ಒಳಗೊಂಡ ತಂಡ ಬಹುಮಾನ ಗಳಿಸಿತು. ಪುರಷರ ತಂಡ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿತು.













