ಬೆಳ್ತಂಗಡಿ: ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಮತ್ತು ಮಾಳವ ಯಾನೆ ಮಲ್ಲವ ಯುವಕ ಸಂಘ ಹಾಗೂ ಮಹಿಳಾ ಸಂಘ ಬೆಳ್ತಂಗಡಿ, ಇದರ 30 ನೇ ವರುಷದ ವಾರ್ಷಿಕೋತ್ಸವದ ಪ್ರಯುಕ್ತ ಮಾಳವ ಯಾನೆ ಮಲ್ಲವರ ಕ್ರೀಡಾಕೂಟ ಕಾರ್ಯಕ್ರಮವು ಮಾರಿಗುಡಿ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾದವ ಕಾವಟೆ ಮತ್ತು ದಾಮೋದರ ಲಾಯಿಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಳವ ಯಾನೆ ಮಲ್ಲವರ ಸಮಾಜಾಭ್ಯುದಯ ಸಂಘದ ಅಧ್ಯಕ್ಷ ಶಿವಶಂಕರ್ ಬೆಳ್ತಂಗಡಿ, ಕೋಶಾಧಿಕಾರಿ ಸತೀಶ್ ರಾಜ್ ಬೆಳ್ತಂಗಡಿ, ಯುವಕ ಸಂಘದ ಅಧ್ಯಕ್ಷ ಮೋಹನ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಬೆಳ್ತಂಗಡಿ, ಕೋಶಾಧಿಕಾರಿ ದಿನೇಶ್ ಮಾಳವ ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಸತೀಶ್, ಕಾರ್ಯದರ್ಶಿ ಅಶ್ವಿನಿ ಉಜಿರೆ, ಕೋಶಾಧಿಕಾರಿ ಮಮತಾ ಪುತ್ತೂರು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.












