ಗುರುವಾಯನಕೆರೆ ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಪ್ರಾರಂಭವಾಯಿತು.
ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರ ಕಾರ್ಯದರ್ಶಿ ದೇಜಪ್ಪ ಪೂಜಾರಿ ಅಳಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಯಾನಂದ ಕಲ್ಲಾಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಜ್ರ ಕುಮಾರ್ ಜೈನ್ ,ತುಳಸೀಧರ್ ಕಜೆಕಾರು, ಯೋಗೀಶ್ ಅಳಕ್ಕೆ, ಹರೀಶ್ ಯೋಜನಾಧಿಕಾರಿಗಳು, ಕಮಲಾಕ್ಷ ಗೌಡ ಕರ್ಪಾಡಿ, ರವಿ ಮಂಜನಾಡಿ, ನಾರಾಯಣ ಪೂಜಾರಿ ಮತ್ತಿತರ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರು, ತರಬೇತುದದಾರ ಆಕಾಶ್, ಸೃಜನ್ ಕುದ್ರಡ್ಕ, ಸೃಜನ್ ಪಣಕಜೆ, ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಭಜನಾ ಗುರುಗಳಾದ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಸಂದೇಶ್ ಮದ್ದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಧನ್ಯವಾದವಿತ್ತರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.












