23 C
ಪುತ್ತೂರು, ಬೆಳ್ತಂಗಡಿ
July 9, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

ಕಳೆಂಜ: ಪ್ರಸಿದ್ದ ಶ್ರೀ ಸದಾಶಿವೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೇ 23 ರಂದು ಭತ್ತದ ನೇಜಿ ನಾಟಿ ಕಾರ್ಯಕ್ರಮವು ಜರುಗಿತು. ಕೊಡಂಗೆಯ ಪ್ರಮುಖರಾದ ಸುಬ್ರಾಯ ಗೌಡ ಕೊಡಂಗೆ ಅವರು ಭತ್ತದ ನೇಜಿ ನಾಟಿ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ದೇವಸ್ಥಾನದಿಂದ ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಪೂಜೆಗಾಗಿ ಭತ್ತದ ತೆನೆಯನ್ನು (ಹೊಸತು) ಸಮರ್ಪಿಸುವ ಉದಾತ್ತ ಉದ್ದೇಶದಿಂದ ಈ ಕೃಷಿ ಕಾಯಕವನ್ನು ನಡೆಸಿಕೊಂಡು ಬರಲಾಗುತ್ತಿದೆ.


ಈ ಸಂದರ್ಭದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಶ್ರೀಧರ್ ರಾವ್, ದೇವಸ್ಥಾನದ ಸಮಿತಿ ಸದಸ್ಯ ನೀಲಯ್ಯ ಗೌಡ, ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ರಘು ಚಂದ್ರ ಪೂಜಾರಿ ಚಾಕೋಟೆತ್ತಡಿ ಹಾಗೂ ರಾಮಚಂದ್ರ ಗೌಡ ಕೊಳಂಬೆ, ಗ್ರಾ.ಪಂ. ಸಿಬ್ಬಂದಿ ಉಮೇಶ್, ಸೀತಾರಾಮ ಶೆಟ್ಟಿ ಕಡಮದಕೋಡಿ, ಬಾಬು ಶೆಟ್ಟಿ ಕಡಮದಕೋಡಿ, ಪ್ರಭಾಕರ ಗೌಡ ಕಾಂತ್ರೆಲು, ಮೀನಾಕ್ಷಿ ಮುಡಾಯಿ ಮಜಲು, ಗೀತಾ ಕಜೆತ್ತ ಕೋಡಿ, ವೆಂಕಪ್ಪ ಬರಮೇಲು, ಶೀಲಾವತಿ ಬರೆಂಗಾಯ ಹಾಗೂ ಗ್ರಾಮ ಪಂಚಾಯತ್‌ ಸಿಬ್ಬಂದಿ ಉಮೇಶ್ ಉಪಸ್ಥಿತರಿದ್ದರು.

Related posts

ಲಾಯಿಲ:ಉಮ್ಮಣ್ಣ ಗೌಡ ನಿಧನ

Suddi Udaya

ಜೂ.12 ರಂದು ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಲೋಕ ಅದಾಲತ್

Suddi Udaya

ಸೇಕ್ರೆಡ್ ಹಾರ್ಟ್ ಚರ್ಚ್ ನ ನೂತನ ಪ್ರಧಾನ ಧರ್ಮ ಗುರು ವಂದನೀಯ ಸ್ಟ್ಯಾನಿ ಗೋವಿಯಸ್ ರಿಗೆ ಮಡಂತ್ಯಾರು ನಾಗರಿಕರ ಪರವಾಗಿ ಸ್ವಾಗತ

Suddi Udaya

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya
error: Content is protected !!