
ಪುತ್ತೂರಿನ ಕಬಕ ನಿವಾಸಿ ಅಕ್ಷತಾ ಎ ಪಿ ರವರು ‘A CRITICAL STUDY ON RESOLUTION OF COMMERCIAL DISPUTES IN REAL ESTATE SECTOR THROUGH ADR MECHANISM’ ಎಂಬ ವಿಷಯದ ಮೇಲೆ ತಮ್ಮ ಪಿಹೆಚ್ಡಿ ಮಹಾಪ್ರಬಂಧವನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಕ್ಕೆ (KSLU) ಸಲ್ಲಿಸಿ ಪಿಹೆಚ್ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ.
ಮಂಗಳೂರಿನ ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರನಾಥ್ ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಪೂರ್ಣಗೊಳಿಸಿರುವ ಡಾ ಅಕ್ಷತಾ ಎಪಿ ಯವರು ಪ್ರಸ್ತುತ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 2019-20 ರಿಂದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಎಸ್ ಡಿ ಎಮ್ ಪಿಯು ಕಾಲೇಜ್ ಉಜಿರೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿರುವ ರಾಜೇಶ್ ಕಲ್ಬೆಟ್ಟುರವರ ಪತ್ನಿ. ಕಡಬದ ನಿವೃತ್ತ ಮೆಸ್ಕಾಂ ಇಂಜಿನಿಯರ್ ಅಣ್ಣಿ ಗೌಡ ಪಣೆಮಜಲು ಮತ್ತು ದುರ್ಗಾವತಿ ರವರ ಪುತ್ರಿ ಹಾಗೂ ಬೆಳ್ತಂಗಡಿ ತಾಲೂಕು ಮಲವಂತಿಗೆಯ ಕುಂಞಿಯಣ್ಣ ಗೌಡ ಕಲ್ಬೆಟ್ಟು ಮತ್ತು ಜಾನಕಿ ರವರ ಸೊಸೆ.












