ಬೆಳ್ತಂಗಡಿ : ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ರಚನೆಯು ಜು.8ರಂದು ನಡೆಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾದ್ಯಕ್ಷ ಗೋಪಾಲ ಗೌಡ ಮುದ್ದುಂಜ ಅಧ್ಯಕ್ಷತೆ ವಹಿಸಿದ್ದರು .ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಪ್ರಭಾರ ಉಪ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಸಭೆಯನ್ನು ನಡೆಸಿಕೊಟ್ಟರು, ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿ ಸ್ವಾಗತಿಸಿದರು. ಅದ್ಯಾಪಕರಾದ ದಿನೇಶ್ ರಮ್ಯಾ, ಆಶಾಲತಾ, ಬಿ.ಕೆ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾಗಿ ಹಮೀದ್ ಜಿ.ಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಜ್ಯೋತಿ, ಕೋಶಾಧಿಕಾರಿಯಾಗಿ ಯೋಗಿಶ್ ಕುಮಾರ್ ಎಸ್ ಆರ್, ಉಪಾದ್ಯಕ್ಷರುಗಳಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ,ಗೋಪಾಲ ಗೌಡ ಮುದ್ದುಂಜ, ಸಂಚಾಲಕರಾಗಿ ಭುವನೇಶ್ ಜಿ, ಗೌರವ ಸಲಹೆಗಾರರಾಗಿ ಕೇಶವ ಬಂಗೇರ ಬಿ,ಹರೀಶ್ ಕುಮಾರ್,ರಾಘವ ಎಚ್,ಉಮೇಶ್ ಕೇಲ್ಡಡ್ಕ, ಶ್ರವಣ್ ಕುಮಾರ್ ನಾಳ, ಮನ್ಸೂರ್.ಜಿ,ಅರ್ಶದ್ , ಗಿರಿಯಪ್ಪಗೌಡ,ಗಣೇಶ್ ಕೆ.ಬಿ,ಜೊತೆ ಕಾರ್ಯದರ್ಶಿಗಳಾಗಿ ರಮೇಶ್ ವಂಜಾರೆ, ಕು.ಪ್ರಕೃತಿ,ಕು.ಆಯಿಶಾ ಹಾಗೂ ಸದಸ್ಯರಾಗಿ ಕು. ಶ್ರೇಯಾ,ಕು.ತಹ್ ಸೀನಾ, ಸಂತೋಷ್ ಕೆ ಆರ್, ಸಿದ್ದೀಕ್ ಎಲ್ತ್ರಡ್ಕ, ಅಲ್ತಾಫ್ ಆಯ್ಕೆಯಾದರು.















