24.7 C
ಪುತ್ತೂರು, ಬೆಳ್ತಂಗಡಿ
August 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು ಸೊಸೈಟಿ ಹಗರಣ ಪ್ರಕರಣ : ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಹಲ್ಲೆ

ಬೆಳ್ತಂಗಡಿ : ಬೆಳಾಲು ಸಿಎ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಮೇಲೆ ವಿಘ್ನೇಶ್ ಗೌಡ ಎಂಬಾತ ಹಲ್ಲೆ ನಡೆಸಿ ಗಾಯಗೊಳಿಸಿ ಅವಾಚ್ಯ ಶಬ್ಧಗಳಿಂದ ಬೈದಿರುವುದಾಗಿ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿಘ್ನೇಶ್ ಗೌಡ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಈ ಘಟನೆ ಬಗ್ಗೆ ದೂರುದಾರ ಆರೋಪಿ ಬಂದಾರು ಗ್ರಾಮದ ಬೈದ್ರೊಟ್ಟು ನಿವಾಸಿ ಪ್ರಶಾಂತ್ ಧರ್ಮಸ್ಥಳ ಠಾಣೆಗೆ ದೂರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಅನುಮತಿಯ ಆದೇಶ ದೊರೆತ ಬಳಿಕ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ: ಬೆಳ್ತಂಗಡಿ ತಾಲೂಕಿನ ಬೆಳಾಲು ಸೊಸೈಟಿಗೆ ಎ.22 ರಂದು ಬಂದಿದ್ದ ಪ್ರಶಾಂತ್ ತನ್ನ ಕೆಲಸ ಮುಗಿಸಿ ಸೊಸೈಟಿಯಿಂದ ಹೊರಗೆ ಬಂದಾಗ ಸೊಸೈಟಿ ವಠಾರದಲ್ಲಿದ್ದ ತನ್ನ ಪರಿಚಯಸ್ಥ ವಿಘ್ನೇಶ್ ಗೌಡ ಎಂಬಾತನು ಪ್ರಶಾಂತ್ ಬಳಿ ಬಂದು “ನನ್ನ ಬಂಗಾರ ಎಲ್ಲಿ” ಎಂದು ಜಗಳ ತೆಗೆದು ಆತನಿಗೆ ಕೈಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆರೋಪಿ ವಿಘ್ನೇಶ್ ಗೌಡ ಕೈಯಿಂದ ಹಲ್ಲೆ ಮಾಡಿದಾಗ ಪ್ರಶಾಂತ್ ಕೈ ಅಡ್ಡ ಇಟ್ಟಾಗ ಆತನ ಕೈ ಬೆರಳಿಗೆ ಗಾಯವಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.15 ರಂದು ಬಿಎನ್‌ಎಸ್ ೧೧೫(೨), ೩೫೨ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಸರಕಾರಕ್ಕೆ ಮನವಿ

Suddi Udaya

ಧರ್ಮಸ್ಥಳ ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲಾ ಅಧ್ಯಾಪಕ ವೃಂದದವರಿಂದ ಡಾ. ಡಿ ಹೆಗ್ಗಡೆಯವರ ಭೇಟಿ: ಅಭಿನಂದನೆ

Suddi Udaya

ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಎಂಟನೇ ಸುತ್ತಿನಲ್ಲಿ 7906 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

Suddi Udaya
error: Content is protected !!