July 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಎ.ಬಿ.ಕೆ ಗಲ್ಫ್ ಕಮಿಟಿ ಕುದ್ರಡ್ಕ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್”

ಬೆಳ್ತಂಗಡಿ: ಅನಿವಾಸಿ‌ ಬ್ರದರ್ಸ್ ಕುದ್ರಡ್ಕ ಎ.ಬಿ.ಕೆ ಸಾಂತ್ವನ ಕಾರುಣ್ಯ ಗಲ್ಫ್ ಸಮಿತಿ ಕುದ್ರಡ್ಕ ಇದರ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್” ಗಲ್ಫ್ ಸ್ನೇಹಿತರ ಸ್ನೇಹ-ಸಮ್ಮಿಲನ ಕಾರ್ಯಕ್ರಮ ಮೇ28 ರಂದು ಸೌದಿ ಅರೇಬಿಯಾದ ದಮ್ಮಾಮ್ “ಗಝಾಝ್” ಇಸ್ತಿರಾದಲ್ಲಿ ನಡೆಯಿತು.

ಸೌದಿ ಅರೇಬಿಯಾದ ವಿವಿಧ ಭಾಗಗಳಿಂದ ಸದಸ್ಯರು ಭಾಗವಹಿಸಿದ್ದು ಹಾಗೂ ಯುಏಯಿ, ದುಬೈ ಹಾಗೂ ಅಬುದಾಬಿ ಸೇರಿದಂತೆ ಹೆಚ್ಚಿನ ಗಲ್ಫ್ ಸದಸ್ಯರು ಆಧುನಿಕ ಆನ್ಲೈನ್ ತಂತ್ರಜ್ಞಾನ ಸಂಪರ್ಕದ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮವು ಆಧ್ಯಾತ್ಮಿಕ ದ್ಸಿಕ್ರ್ ಸ್ವಲಾತ್, ತಹ್ಲೀಲ್ ಸಮರ್ಪಣೆ, ಮಜ್ಲಿಸ್, ದುವಾಃದೊಂದಿಗೆ ಪ್ರಾರಂಭಿಸಲಾಯಿತು.

ಎ.ಬಿ.ಕೆ ಗಲ್ಫ್ ಸಮಿತಿ ಇದರ ಮಾರ್ಗದರ್ಶಕ ನಿಝಾರ್ ಕೆ.ಎಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್ ಕಳೆದ ಅವಧಿಯ ವರದಿ ಮಂಡಿಸಿದರು. ಸಾಮಾಜಿಕ-ಶೈಕ್ಷಣಿಕ ಸೇವೆ ಮತ್ತು ಜೀವಕಾರುಣ್ಯ ಸಾಂತ್ವನ ‌ಯಶಸ್ವಿ ಕಾರ್ಯವೈಖರಿಗಳು ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ವಾರ್ಷಿಕ ಬಜೆಟ್ ಪ್ರಸ್ತಾಪಿಸಿದರು.ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಲೆಕ್ಕಪತ್ರ ವಾಚಿಸಿದರು.ಈ ವೇಳೆ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಇಮ್ತಿಯಾಝ್ ಕುದ್ರಡ್ಕ, ಉಪಾಧ್ಯಕ್ಷರಾಗಿ ಸಮೀರ್ ಕೆ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್,ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಫೈಸ್ಟಾರ್, ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಹಾಗೂ ಕ್ಯಾಬಿನೆಟ್ ಸದಸ್ಯರುಗಳನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ “ಮೆಹ್ಫಿಲ್-ಈ-ಗಲ್ಫ್ ಮೀಟ್ ಸ್ನೇಹಿತರ ಚರ್ಚಾಗೋಷ್ಠಿ, ಸ್ನೇಹ ಭೋಜನ ಸಭೆಗೆ ಮೆರುಗು ತಂದುಕೊಟ್ಟಿತು.

Related posts

ಕೊಯ್ಯೂರು ಗ್ರಾಮ ಪಟ್ಟಣ ಪಂಚಾಯತ್ ಸೇರ್ಪಡೆ ಆದೇಶ ರದ್ದು ಪಡಿಸುವಂತೆ ಮನವಿ

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ನ ಗ್ರಾಮ ಸಭೆ: ಗರ್ಭಿಣಿಯರು, ಬೆನ್ನುನೋವಿದ್ದರು ಈ ರಸ್ತೆಯಲ್ಲಿ ಸಾಗಿದರೆ ಸಮಸ್ಯೆ ಗ್ಯಾರಂಟಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಬಂದಾರು ಮತ್ತು ಮೊಗ್ರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ

Suddi Udaya

ಶಿಶಿಲ: ತುಳುನಾಡ ನರ್ಸರಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ

Suddi Udaya

ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ತರಬೇತಿ ಕಾರ್ಯಕ್ರಮ

Suddi Udaya
error: Content is protected !!