

ಆರಂಬೋಡಿ: ವಿದ್ಯಾರ್ಜನೆಗೈಯುವ ಮಕ್ಕಳಲ್ಲಿ ಆತ್ಮಸ್ಥೆರ್ಯ ಮೂಡಿಸುವ ಉದ್ದೇಶದಿಂದ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮನೋಜ್- ಧನ್ಯಶ್ರೀ ದಂಪತಿ ಆರಂಬೋಡಿ ಗ್ರಾಮದ ಎಂಟು ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಆರಂಬೋಡಿ, ಮಂಚಕಲ್ಲು, ಹೊಕ್ಕಾಡಿಗೋಳಿ, ರಾಯಿ, ಪಿಲ್ಲಂಗೋಳಿ, ಹನ್ನೆರಡು ಕವಲು, ಗುಂಡೂರಿ, ಕಡ್ತಲಬೆಟ್ಟು ಶಾಲೆಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನೋಜ್ ದಂಪತಿ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಬರುತ್ತಿದ್ದಾರೆ.












